ಬೆಂಗಳೂರು: ಬಿಜೆಪಿ ಕಾರ್ಯಕರ್ತ ಕೆ.ಸಂತೋಷ್ ಹತ್ಯೆ ಕುರಿತು ಗೃಹ ಸಚಿವ ರಾಮಲಿಂಗಾರೆಡ್ಡಿ ನೀಡಿದ್ದ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ, ಗೃಹ ಸಚಿವರ ವಿಳಾಸಕ್ಕೆ ಸ್ಕ್ರೂ ಡ್ರೈವರ್ ಕಳುಹಿಸಿ ಪ್ರತಿಭಟಿಸಲು ನಿರ್ಧರಿಸಿದೆ.
‘ಸ್ಕ್ರೂ ಡ್ರೈವರ್ನಿಂದ ಸುಮ್ಮನೆ ಚುಚ್ಚಿದ್ದಕ್ಕೆ ಸತ್ತಿದ್ದಾರೆ..’ ಎಂದು ಗೃಹ ಸಚಿವರು ಹೇಳಿರುವುದನ್ನು ಖಂಡಿಸಿ, ಗೃಹ ಸಚಿವರ ರಾಜೀನಾಮೆಗೆ ಬಿಜೆಪಿ ರಾಜ್ಯ ಘಟಕದ ಯುವ ಮೋರ್ಚಾ ಅಭಿಯಾನ(#ScrewedUpHomeMinister) ಪ್ರಾರಂಭಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.