ADVERTISEMENT

ಜಯನಗರ ಆರ್‌ಟಿಒ; ₹4 ಲಕ್ಷ ವಶ, ಮಧ್ಯವರ್ತಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2019, 20:02 IST
Last Updated 13 ಸೆಪ್ಟೆಂಬರ್ 2019, 20:02 IST
ಜಯನಗರ ಆರ್‌ಟಿಒ ಕಚೇರಿಯಲ್ಲಿ ವಶಪಡಿಸಿಕೊಂಡ ಹಣ
ಜಯನಗರ ಆರ್‌ಟಿಒ ಕಚೇರಿಯಲ್ಲಿ ವಶಪಡಿಸಿಕೊಂಡ ಹಣ   

ಬೆಂಗಳೂರು: ಜಯನಗರದ ಆರ್‌ಟಿಒ ಕಚೇರಿ ಮೇಲೆ ಶುಕ್ರವಾರ ದಾಳಿ ನಡೆಸಿದ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳು ₹ 4.11 ಲಕ್ಷ ಹಣ ವಶಪಡಿಸಿಕೊಂಡು ಡಜನ್‌ಗೂ ಹೆಚ್ಚು ಮಧ್ಯವರ್ತಿಗಳನ್ನು ಬಂಧಿಸಿದ್ದಾರೆ.

ಮಧ್ಯವರ್ತಿಗಳ ಬಳಿ ₹ 1.40 ಲಕ್ಷ ಸಿಕ್ಕಿದೆ. ಆರ್‌ಟಿಒ ಕಚೇರಿಯೊಳಗೆ ಬ್ಯಾಗ್‌ನಲ್ಲಿ ವಾರಸುದಾರರಿಲ್ಲದೆ ಬಿದ್ದಿದ್ದ ₹ 2.71 ಲಕ್ಷವನ್ನು ಎಸಿಬಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಜಯನಗರ ಆರ್‌ಟಿಒ ಕಚೇರಿಯಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದ್ದು, ಭ್ರಷ್ಟಾಚಾರ ವ್ಯಾಪಕವಾಗಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಈ ದಾಳಿ ನಡೆಯಿತು.

ADVERTISEMENT

ಎಸಿಬಿ ಐಜಿಪಿ ಚಂದ್ರಶೇಖರ್‌ ಅವರ ಮಾರ್ಗದರ್ಶನದಲ್ಲಿ ನಡೆದ ದಾಳಿಯಲ್ಲಿ ಅನೇಕ ಅಧಿಕಾರಿಗಳು ಭಾಗವಹಿಸಿದ್ದರು. ಆರ್‌ಟಿಒ ಸಂಕೀರ್ಣದಲ್ಲಿರುವ ಕೆಲವು ಮಳಿಗೆಗಳಲ್ಲಿ ಮತ್ತು ಮಧ್ಯವರ್ತಿಗಳ ಬಳಿ ಡಿ.ಎಲ್‌ ಹಾಗೂ ಆರ್‌.ಸಿ ಸ್ಮಾರ್ಟ್‌ಕಾರ್ಡ್‌ ಸೇರಿದಂತೆ ಅನೇಕ ದಾಖಲೆ ಗಳು ಸಿಕ್ಕಿವೆ. ತನಿಖೆ ಮುಂದುವರಿಯುತ್ತಿದೆ.

ಈ ಹಿಂದೆ, ನಗರದ ಆರ್‌ಟಿಒ ಕಚೇರಿಯೊಂದರ ಮೇಲೆ ನಡೆದ ದಾಳಿ ಸಮಯದಲ್ಲೂ ಅಂಗಡಿಗಳಿಂದ ಡಿ.ಎಲ್‌, ಆರ್‌.ಸಿ ಸ್ಮಾರ್ಟ್‌ ಕಾರ್ಡ್‌ ಗಳನ್ನು ವಶಪಡಿಸಿಕೊಳ್ಳಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.