ಬೆಂಗಳೂರು: ವ್ಯಾಲ್ಯೂ ಪ್ರಾಡೆಕ್ಟ್ ಪ್ರೈವೇಟ್ ಲಿಮಿಟೆಡ್ ತಯಾರಿಸುತ್ತಿರುವ ಹಾಗೂ ಓಂ ಶ್ರೀ ಎಂಟರ್ಪ್ರೈಸಸ್ ವಿತರಿಸುತ್ತಿರುವ ನೂತನ ‘ಅಮೃತ್ನೋನಿ ನೋವು ನಿವಾರಕ ತೈಲ’ವನ್ನು ಚಲನಚಿತ್ರ ನಟ ಸುದೀಪ್ ಬಿಡುಗಡೆ ಮಾಡಿದರು.
ನಗರದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು, ‘ಪ್ರಸ್ತುತ ಸನ್ನಿವೇಶದಲ್ಲಿ ನಮ್ಮ ಆಯುರ್ವೇದ ಪದ್ಧತಿಗೆ ಹೆಚ್ಚಿನ ಮಹತ್ವ ಸಿಗುತ್ತಿದೆ. ಪ್ರತಿಯೊಬ್ಬರೂ ಇಂದು ಆಯುರ್ವೇದ ಉತ್ಪನ್ನವನ್ನು ಬಳಸಲಾರಂಭಿಸಿದ್ದಾರೆ. ‘ಅಮೃತ್ನೋನಿ’ ಉತ್ಪನ್ನಗಳು ಲಕ್ಷಾಂತರ ಜನರ ಆರೋಗ್ಯವನ್ನು ಕಾಪಾಡುವಲ್ಲಿ ಯಶಸ್ವಿ ಯಾಗಿದೆ. ನೂತನ ಉತ್ಪನ್ನವು ಜನರ ನೋವನ್ನು ನಿವಾರಿಸಿ, ದೇಹಕ್ಕೆ ಆರಾಮವನ್ನು ನೀಡಲಿ’ ಎಂದು ಶುಭ ಹಾರೈಸಿದರು.
ವ್ಯಾಲ್ಯೂ ಪ್ರಾಡೆಕ್ಟ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಶ್ರೀನಿವಾಸ ಮೂರ್ತಿ ಮಾತನಾಡಿ, ‘ನಾವು ಆರಂಭದಿಂದಲೂ ಉತ್ಪನ್ನಗಳ ತಯಾರಿಕೆಯಲ್ಲಿ ಗುಣಮಟ್ಟಕ್ಕೆ ಹೆಚ್ಚಿನ ಮಹತ್ವ ನೀಡುತ್ತಾ ಬಂದಿದ್ದೇವೆ. ಈಗ ಬಿಡುಗಡೆಯಾಗಿರುವ ತೈಲ ಕೂಡಾ ಆಯುರ್ವೇದ ತಜ್ಞರ ಸಂಶೋಧನೆಯ ಒಂದು ಅತ್ಯುನ್ನತ ಉತ್ಪನ್ನವಾಗಿದೆ. ನೋವು ಹಾಗೂ ಉರಿಯೂತದಿಂದ ತೊಂದರೆ ಅನುಭವಿಸುತ್ತಿರುವವರಿಗೆ ಈ ನಮ್ಮ ತೈಲವು ಪರಿಣಾಮಕಾರಿಯಾದ ಫಲಿತಾಂಶ ನೀಡಲಿದೆ’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.