ಬೆಂಗಳೂರು: ಅಶೋಕನಗರ ಬಳಿಯ ರೆಸಿಡೆನ್ಸಿ ರಸ್ತೆಯಲ್ಲಿ ಪಾನಮತ್ತರಾಗಿ ಗಲಾಟೆ ಮಾಡಿ, ತಡೆಯಲು ಬಂದ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದ ಆರೋಪದಡಿ ಸೌದಿ ಅರೇಬಿಯಾದ ಇಬ್ಬರನ್ನು ಬಂಧಿಸಲಾಗಿದೆ.
ಅಮರ್ ಅಲಿ ಸಲಾಂ ಹಾಗೂಹುಸೇನ್ ಸಲಾಂ ಮೊಹಮ್ಮದ್ ಬಂಧಿತರು. ‘ಪಾನಮತ್ತರಾಗಿದ್ದ ಆರೋಪಿಗಳು ಹಾಗೂ ಅವರ ಸ್ನೇಹಿತರು, ರಸ್ತೆಯಲ್ಲಿ ಗುಂಪು ಸೇರಿ ಕಿರುಚಾಡುತ್ತಿದ್ದರು. ದಾರಿಹೋಕರ ಜೊತೆ ಜಗಳ ತೆಗೆಯುತ್ತ ವಾಹನಗಳ ಸಂಚಾರಕ್ಕೆ ಅಡ್ಡಿಪಡಿಸುತ್ತಿದ್ದರು. ಆ ಬಗ್ಗೆ ಸ್ಥಳೀಯರು ನೀಡಿದ್ದ ಮಾಹಿತಿಯಂತೆ ಹೊಯ್ಸಳ ಗಸ್ತು ವಾಹನದ ಸಿಬ್ಬಂದಿ ಸ್ಥಳಕ್ಕೆ ಹೋಗಿದ್ದರು’ ಎಂದು ಅಶೋಕನಗರ ಪೊಲೀಸರು ಹೇಳಿದರು. ‘ಸಿಬ್ಬಂದಿ ಜೊತೆಯೇ ಆರೋಪಿಗಳು ಜಗಳ ತೆಗೆದಿದ್ದರು. ಸಮವಸ್ತ್ರ ಹಿಡಿದು ಎಳೆದಾಡಿದ್ದರು ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.