ADVERTISEMENT

ಪತ್ನಿ ಚುಡಾಯಿಸಿದ್ದಕ್ಕೆ ಹಲ್ಲೆ: ಎರಡು ಎಫ್‌ಐಆರ್

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2021, 17:52 IST
Last Updated 11 ಡಿಸೆಂಬರ್ 2021, 17:52 IST

ಬೆಂಗಳೂರು: ಕೆಂಪೇಗೌಡ ನಗರ ಠಾಣೆ ವ್ಯಾಪ್ತಿಯಲ್ಲಿ ಭದ್ರತಾ ಸಿಬ್ಬಂದಿಗಳಿಬ್ಬರ ನಡುವೆ ಮಾರಾಮಾರಿ ನಡೆದಿದ್ದು, ಇದರ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

‘ಭದ್ರತಾ ಕೆಲಸ ಮಾಡುವ ವಾಸು ಹಾಗೂ ಯತೀಶ್ ನಡುವೆ ಗಲಾಟೆ ಆಗಿದೆ. ಇಬ್ಬರೂ ದೂರು ನೀಡಿದ್ದು, ಪ್ರತ್ಯೇಕ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಕೆಂಪೇಗೌಡ ನಗರ ಠಾಣೆ ಮೂಲಗಳು ಹೇಳಿವೆ.

ವಾಸು ಅವರ ಪತ್ನಿಯನ್ನು ಚುಡಾಯಿಸುತ್ತಿದ್ದ ಯತೀಶ್, ಮೊಬೈಲ್‌ಗೆ ಅಶ್ಲೀಲ ಸಂದೇಶ ಕಳುಹಿಸಿ ಪೀಡಿಸುತ್ತಿದ್ದರು ಎಂಬುದು ಗಲಾಟೆಗೆ ಕಾರಣ. ‘ವಾಸು ಹಲ್ಲೆ ಮಾಡಿದ್ದಾಗಿ ಯತೀಶ್, ಪತ್ನಿಯನ್ನು ಯತೀಶ್ ಚುಡಾಯಿಸುತ್ತಿದ್ದರೆಂದು ಎಂದು ವಾಸು ದೂರು ಕೊಟ್ಟಿದ್ದಾರೆ‘ ಎಂದು ತಿಳಿಸಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.