ಕೆ.ಆರ್.ಪುರ: ‘ಮಾಸ್ಕ್ ಹಾಕಿಕೊಳ್ಳಿ’ ಎಂದು ಹೇಳಿದ್ದಕ್ಕೆ ಬಿಬಿಎಂಪಿ ಮಾರ್ಷಲ್ ಮೇಲೆಯೇ ಹಲ್ಲೆ ಮಾಡಿದ್ದ ಇಬ್ಬರು ಆರೋಪಿಗಳನ್ನು ಕೆ.ಆರ್.ಪುರ ಪೊಲೀಸರು ಬಂಧಿಸಿದ್ದಾರೆ.
ಕುಲದೇವಿ ಗ್ರಾಮದ ಅರುಣ್ (26) ಹಾಗೂ ಜಗದೀಶ್ (28) ಬಂಧಿತರು.
‘ಕೆ.ಆರ್.ಪುರ ಠಾಣೆ ವ್ಯಾಪ್ತಿಯಲ್ಲಿ ಓಡಾಡುತ್ತಿದ್ದ ಆರೋಪಿಗಳು, ಮಾಸ್ಕ್ ಧರಿಸಿರಲಿಲ್ಲ. ಅದೇ ಸ್ಥಳದಲ್ಲೇ ಕರ್ತವ್ಯ ನಿರ್ವಹಿಸುತ್ತಿದ್ದ ಮಾರ್ಷಲೊಬ್ಬರು ಆರೋಪಿಗಳನ್ನು ತಡೆದು ಪ್ರಶ್ನಿಸಿದ್ದರು. ‘ಕೊರೊನಾ ಸೋಂಕಿತರು ಹೆಚ್ಚಾಗುತ್ತಿದ್ದಾರೆ. ದಯವಿಟ್ಟು ಮಾಸ್ಕ್ ಹಾಕಿಕೊಂಡು ಓಡಾಡಿ’ ಎಂದು ಹೇಳಿದ್ದರು. ದಂಡ ಪಾವತಿಸುವಂತೆಯೂ ತಿಳಿಸಿದ್ದರು’ ಎಂದು ಕೆ.ಆರ್.ಪುರ ಪೊಲೀಸರು ಹೇಳಿದರು.
‘ಮಾರ್ಷಲ್ ಜೊತೆ ವಾಗ್ವಾದ ನಡೆಸಿದ ಆರೋಪಿಗಳು, ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಸಹ ಮಾಡಿದರು' ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.