ADVERTISEMENT

ಸಂಶೋಧನೆಗಳ ದಾರಿಸ್ಫೂರ್ತಿಯ ‘ಆವಿಷ್ಕಾರೋತ್ಸವ’

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2020, 20:30 IST
Last Updated 27 ಫೆಬ್ರುವರಿ 2020, 20:30 IST
ಪ್ರದರ್ಶನವನ್ನು ಡಾ.ಸರಗೂರ ಎಂ.ಶ್ರೀನಿಧಿ ವೀಕ್ಷಿಸಿದರು. ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತು ಸಂಗ್ರಹಾಲಯ ನಿರ್ದೇಶಕ ಕೆ. ಮದನ್‌ಗೋಪಾಲ್‌ ಇದ್ದರು
ಪ್ರದರ್ಶನವನ್ನು ಡಾ.ಸರಗೂರ ಎಂ.ಶ್ರೀನಿಧಿ ವೀಕ್ಷಿಸಿದರು. ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತು ಸಂಗ್ರಹಾಲಯ ನಿರ್ದೇಶಕ ಕೆ. ಮದನ್‌ಗೋಪಾಲ್‌ ಇದ್ದರು   

ಬೆಂಗಳೂರು: ಸೂರ್ಯನನ್ನೇ ಸ್ಫೂರ್ತಿಯಾಗಿಟ್ಟುಕೊಂಡು ಅಭಿವೃದ್ಧಿ ಪಡಿಸಿದ ಸಾಧನಗಳು, ನೇಸರನಿಂದ ಪಡೆದ ಶಕ್ತಿಯಿಂದ ಅಡುಗೆ ತಯಾರಿಸಿಕೊಡುವ ಪಾತ್ರೆಗಳು, ಕಸ ಸಂಗ್ರಹಿಸುವಾಗ ಬ್ಲೇಡ್‌ ಅಥವಾ ಅಪಾಯಕಾರಿ ವಸ್ತುಗಳ ಬಗ್ಗೆ ಪೌರಕಾರ್ಮಿಕರಿಗೆ ಸೂಚನೆ ನೀಡುವ ಕೈಗವಸು...

ಹೀಗೆ, ಹೊಸ ಯೋಚನೆಗಳ ಸಾಕಾರ ರೂಪದಂತಿದ್ದ ಸಾಧನಗಳನ್ನು ನಗರದಲ್ಲಿ ಗುರುವಾರದಿಂದ ಆರಂಭವಾಗಿರುವ ‘ಆವಿಷ್ಕಾರೋತ್ಸವ’ದಲ್ಲಿ ಪ್ರದರ್ಶಿಸಲಾಗಿದೆ. ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ
ವಸ್ತು ಸಂಗ್ರಹಾಲಯದಲ್ಲಿ ಇದೇ 29ರವರೆಗೆ ಪ್ರದರ್ಶನ ನಡೆಯಲಿದೆ.

ವಿಜ್ಞಾನ ಮಾದರಿಗಳ ವಸ್ತುಪ್ರದರ್ಶನದ ಜೊತೆಗೆ ಗಣಿತ ಹಾಗೂ ಓರಿಗಾಮಿ ಕುರಿತು ಹೊಸ ವಿಧಾನಗಳನ್ನು ಸಾದರಪಡಿಸುವ ಕಾರ್ಯವೂ ಈ ಆವಿಷ್ಕಾರೋತ್ಸವದಲ್ಲಿ ನಡೆಯುತ್ತಿದೆ. ಕಾಗದದೊಂದಿಗೆ ಬೆರಳುಗಳ ಕೈಚಳಕದಲ್ಲಿ ಸುಂದರ ಆಕೃತಿಗಳನ್ನು ಮಾಡುವ ಈ ಓರಿಗಾಮಿ ಕಲೆ, ವಿದ್ಯಾರ್ಥಿಗಳನ್ನುಆಕರ್ಷಿಸುತ್ತಿದೆ. 36 ಮಳಿಗೆಗಳನ್ನು ಉತ್ಸವದಲ್ಲಿ ಹಾಕ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.