ಬೆಂಗಳೂರು: ಕೋವಿಡ್ನಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದ 500 ಆಟೊ ಚಾಲಕರಿಗೆ ಬಜಾಜ್ ಆಟೊ ಲಿಮಿಟೆಡ್ ವತಿಯಿಂದ ದಿನಸಿ ಕಿಟ್ಗಳನ್ನು ಉಚಿತವಾಗಿ ವಿತರಿಸಲಾಯಿತು.
ಹೊಸೂರು ಮುಖ್ಯರಸ್ತೆಯ ಜಿ.ಬಿ.ಪಾಳ್ಯದಲ್ಲಿರುವ ಅಂಬಾ ಬಜಾಜ್ ಬಳಿ ದಿನಸಿ ಕಿಟ್ ವಿತರಿಸಿ ಮಾತನಾಡಿದ ಸಂಸ್ಥೆಯ ವಿಭಾಗೀಯ ವ್ಯವಸ್ಥಾಪಕ ಎ.ರಾಘವೇಂದ್ರ,‘ಲಾಕ್ಡೌನ್ನಿಂದಾಗಿ ಆಟೊ ಚಾಲಕರ ದುಡಿಮೆಗೆ ಹೊಡೆತ ಬಿದ್ದಿತ್ತು. ಆ ಸಂದರ್ಭದಲ್ಲಿ ಜೀವನ ನಿರ್ವಹಣೆಗೆ ಪರದಾಡಿದ್ದರು. ಇದನ್ನು ಮನಗಂಡ ಬಜಾಜ್, ಆಟೊ ಚಾಲಕರ ನೆರವಿಗೆ ನಿಂತಿದೆ’ ಎಂದರು.
‘ಸಂಸ್ಥೆಯು ಕಳೆದ ವರ್ಷ 10 ಸಾವಿರಕ್ಕೂ ಹೆಚ್ಚು ಬಡವರು ಹಾಗೂ ಆಟೊ ಚಾಲಕರ ಕುಟುಂಬಗಳಿಗೆ ದಿನಸಿ ಕಿಟ್ಗಳನ್ನು ವಿತರಿಸಿತ್ತು. ಈ ವರ್ಷ 12 ಸಾವಿರ ಮಂದಿಗೆ ಕಿಟ್ ವಿತರಿಸಲು ಯೋಜನೆ ರೂಪಿಸಿದೆ. ಈಗಾಗಲೇ ಎಂಟು ಸಾವಿರ ಕಿಟ್ಗಳ ವಿತರಣೆ ನಡೆದಿದೆ’ ಎಂದು ಹೇಳಿದರು.
ಅಂಬಾ ಬಜಾಜ್ನ ಪ್ರಧಾನ ವ್ಯವಸ್ಥಾಪಕ ಜಾನ್, ರಾಕೇಶ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.