ADVERTISEMENT

ಜೈಲಿನಲ್ಲಿ ಅಕ್ರಮ: 7 ಸಿಬ್ಬಂದಿ ವರ್ಗ

​ಪ್ರಜಾವಾಣಿ ವಾರ್ತೆ
Published 21 ಜೂನ್ 2022, 19:30 IST
Last Updated 21 ಜೂನ್ 2022, 19:30 IST
   

Bengaluru: ADGP S Sreejith, who is currently investigating the alleged irregularities in the city's Parappana Agrahara Central Prison The team, officer and staff led by Murugan has recommended action against a total of 18 people.

ಅದರನ್ವಯ ಕಾರಾಗೃಹದ ಏಳು ಸಿಬ್ಬಂದಿಯನ್ನು
(ಮುಖ್ಯ ವೀಕ್ಷಕರು) ವರ್ಗಾವಣೆ ಮಾಡಲಾಗಿದೆ.

ಅಶೋಕ್‌ ಎನ್‌, ಎಸ್‌.ಎನ್‌. ರಮೇಶ್‌, ಶಿವಾನಂದ ಕೆ. ಗಾಣಿಗೇರ್‌, ಉಮೇಶ್‌ ಆರ್‌. ದೊಡ್ಡಮನಿ, ಲೋಕೇಶ್‌ ಪಿ, ಭೀಮಣ್ಣ ದೇವಪ್ಪ ನೇದಲಗಿ (ನಿಲಂಬನದಲ್ಲಿ) ಮತ್ತು ಮಹೇಶ್‌ ಸಿದ್ದನಗೌಡ ಪಾಟೀಲ್‌ ಅವರನ್ನು ಕ್ರಮವಾಗಿ ವಿಜಯಪುರ, ಬಳ್ಳಾರಿ, ಬೆಳಗಾವಿ, ಮೈಸೂರು, ಧಾರವಾಡ, ಶಿವಮೊಗ್ಗ, ಕಲಬುರಗಿ ಕೇಂದ್ರ ಕಾರಾಗೃಹಕ್ಕೆ ವರ್ಗಾವಣೆ ಮಾಡಲಾಗಿದೆ.

ADVERTISEMENT

ಈ ವರದಿಯಲ್ಲಿ ಶಿವಮೊಗ್ಗ ಕೇಂದ್ರ ಕಾರಾಗೃಹದ ಅಧೀಕ್ಷಕ ಪಿ. ಮಹಾದೇವನಾಯ್ಕ ಅವರ ಮೇಲೆ ಅತಿ ಕಠಿಣ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಲಾಗಿದೆ.

ಅವರನ್ನು ಆ ಹುದ್ದೆಯಿಂದ ಮೈಸೂರಿನಲ್ಲಿರುವ ಕಾರಾಗೃಹ ಸಿಬ್ಬಂದಿ ತರಬೇತಿ ಸಂಸ್ಥೆಯ ಪ್ರಾಚಾರ್ಯ
ಹುದ್ದೆಗೆ ವರ್ಗಾವಣೆ ಮಾಡಲಾಗಿದೆ.

ಮೈಸೂರಿನಲ್ಲಿರುವ ಕಾರಾಗೃಹ ಸಿಬ್ಬಂದಿ ತರಬೇತಿ ಸಂಸ್ಥೆಯ ಪ್ರಾಚಾರ್ಯ ಹುದ್ದೆಯಲ್ಲಿ ಪ್ರಭಾರಿಯಾಗಿದ್ದ ‌ಆರ್‌. ಅನಿತಾ ಅವರನ್ನು ಶಿವಮೊಗ್ಗ ಕೇಂದ್ರ ಕಾರಾಗೃಹಕ್ಕೆ ವರ್ಗಾವಣೆ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.