ADVERTISEMENT

ಬೆಂಗಳೂರು ನಗರ ವಿವಿ: ಪರೀಕ್ಷೆ ಮುಂದೂಡಿಕೆ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2021, 11:24 IST
Last Updated 20 ಏಪ್ರಿಲ್ 2021, 11:24 IST

ಬೆಂಗಳೂರು: ‘ಇದೇ 21ರಿಂದ ನಡೆಯಬೇಕಾದ ಬೆಂಗಳೂರು ನಗರ ವಿಶ್ವವಿದ್ಯಾನಿಲಯ ಎಲ್ಲ ಪರೀಕ್ಷೆಗಳನ್ನು ಕೋವಿಡ್‌ ಎರಡನೇ ಅಲೆ ತೀವ್ರಗೊಂಡಿರುವುದರಿಂದ ಮತ್ತು ಸಾರಿಗೆ ನೌಕರರ ಮುಷ್ಕರದ ಕಾರಣಕ್ಕೆ ಮುಂದೂಡಲಾಗಿದೆ’ ಎಂದು ವಿಶ್ವವಿದ್ಯಾಲಯದ ಕುಲಸಚಿವ (ಮೌಲ್ಯಮಾಪನ) ರಮೇಶ್ ಬಿ. ತಿಳಿಸಿದ್ದಾರೆ.

’ಇದೇ 21ರಿಂದ ಆರಂಭವಾಗಬೇಕಿದ್ದ ಎಂಸಿಎ ಕೋರ್ಸ್‌ (3ನೇ ಮತ್ತು 5ನೇ ಸೆಮಿಸ್ಟರ್‌) ಮತ್ತು ಎಂ.ಇಡಿ (3ನೇ ಸೆಮಿಸ್ಟರ್‌) ಪರೀಕ್ಷೆಗಳನ್ನು ಮುಂದಿನ ಆದೇಶದವರೆಗೂ ಮುಂದೂಡಲಾಗಿದೆ. ಪರಿಷ್ಕೃತ ವೇಳಾಪಟ್ಟಿಯನ್ನು ಮುಂದೆ ಪ್ರಕಟಿಸಲಾಗುವುದು’ ಎಂದೂ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT