ADVERTISEMENT

ಬೈಕ್‌ ಕಳವು: ಸೆರೆ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2023, 21:22 IST
Last Updated 8 ಫೆಬ್ರುವರಿ 2023, 21:22 IST
ಆರೋಪಿಗಳಿಂದ ವಶ ಪಡಿಸಿಕೊಂಡ ಬೈಕ್‌ ಹಾಗೂ ಮೊಬೈಲ್‌
ಆರೋಪಿಗಳಿಂದ ವಶ ಪಡಿಸಿಕೊಂಡ ಬೈಕ್‌ ಹಾಗೂ ಮೊಬೈಲ್‌   

ಬೆಂಗಳೂರು: ಬ್ಯಾಡರಹಳ್ಳಿ, ಚಂದ್ರಾ ಲೇಔಟ್‌ ಪೊಲೀಸ್‌ ಠಾಣೆ ವ್ಯಾಪ್ತಿಯ ಬಡಾವಣೆ ಸೇರಿ ನಗರದ ಹಲವು ಸ್ಥಳಗಳಲ್ಲಿ ಬೈಕ್‌ ಕಳವು ಮಾಡಿದ್ದ ಮೂವರು ಆರೋಪಿಗಳನ್ನು ಕೆಂಗೇರಿ ಪೊಲೀಸರು ಬಂಧಿಸಿದ್ದಾರೆ.

ಮಹಾಲಕ್ಷ್ಮಿ ಲೇಔಟ್‌ನ ಕುರುಬರಹಳ್ಳಿಯ ಹಿತೇಶ್‌ ಕುಮಾರ್‌ (19), ಅದೇ ಲೇಔಟ್‌ನ ಯಶೋದಾ ಬ್ಲಾಕ್‌ನ ವಿನೋದ್ (21) ಹಾಗೂ ನಾಗದೇವ ಹಳ್ಳಿ ಜಗಜ್ಯೋತಿ ಲೇಔಟ್‌ನ ವಿಷ್ಣುವರ್ಧನ್‌ (20) ಎಂಬ ಆರೋಪಿಗಳನ್ನು ಬಂಧಿಸಲಾಗಿದೆ. ‘ಬಂಧಿತರಿಂದ ₹ 1.50ಲಕ್ಷ ಮೌಲ್ಯದ ಎರಡು ಬೈಕ್‌ ಹಾಗೂ 6 ಮೊಬೈಲ್‌ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT