ಬೆಂಗಳೂರು: ಕಬ್ಬನ್ ಪಾರ್ಕ್ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಭಾನುವಾರ ನಸುಕಿನಲ್ಲಿ ಅಪಘಾತ ಸಂಭವಿಸಿದ್ದು, ಅಲೆಕ್ಸ್ (25) ಎಂಬುವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
'ರಾಜಾಜಿನಗರ ಪ್ರಕಾಶನಗರದ ಅಲೆಕ್ಸ್, ಯಮಹಾ ಬೈಕ್ನಲ್ಲಿ ಸ್ನೇಹಿತ ಸತೀಶ್ (26) ಜೊತೆ ಕ್ರಿಸ್ಮಸ್ ಪ್ರಾರ್ಥನೆಗೆಂದು ಸೇಂಟ್ ಪ್ಯಾಟ್ರಿಕ್ ಬ್ಯಾಸಿಲಿಕ್ ಚರ್ಚ್ಗೆ ಹೊರಟಿದ್ದಾಗ ಈ ಅವಘಡ ಸಂಭವಿಸಿದೆ. ಹಿಂಬದಿ ಕುಳಿತಿದ್ದ ಸತೀಶ್ ಸಹ ತೀವ್ರ ಗಾಯಗೊಂಡಿದ್ದು, ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ' ಎಂದು ಪೊಲೀಸರು ತಿಳಿಸಿದ್ದಾರೆ.
'ನೋಂದಣಿ ಫಲಕ ಇಲ್ಲದ ಬೈಕ್ನಲ್ಲಿ ಅಲೆಕ್ಸ್ ಹಾಗೂ ಸತೀಶ್ ತೆರಳುತ್ತಿದ್ದರು. ಅತೀ ವೇಗ ಹಾಗೂ ನಿರ್ಲಕ್ಷ್ಯದಿಂದ ಅಲೆಕ್ಸ್ ಬೈಕ್ ಚಲಾಯಿಸಿದ್ದ. ಗೋಪಾಲಗೌಡ ಜಂಕ್ಷನ್ ಬಳಿ ಪಾದಚಾರಿ ಮಾರ್ಗಕ್ಕೆ ನುಗ್ಗಿದ್ದ ಬೈಕ್, ಗೋಡೆಗೆ ಡಿಕ್ಕಿ ಹೊಡೆದಿತ್ತು. ತೀವ್ರ ಗಾಯಗೊಂಡು ಅಲೆಕ್ಸ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ' ಎಂದೂ ಮಾಹಿತಿ ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.