ಗಾಂಧಿ ಬಜಾರ್ನ ವಿದ್ಯಾರ್ಥಿ ಭವನದ ಸಮೀಪದ ಪಾದಚಾರಿ ಮಾರ್ಗವನ್ನು ವ್ಯಾಪಾರಿಗಳು ಅತಿಕ್ರಮಿಸಿಕೊಂಡಿದ್ದಾರೆ. ಈಗ ಪಾದಚಾರಿ ಮಾರ್ಗ ಮಾತ್ರವಲ್ಲದೆ ರಸ್ತೆವರೆಗೂ ಈ ಅತಿಕ್ರಮಣ ವ್ಯಾಪಿಸಿದೆ. ಇದರಿಂದ ಪಾದಚಾರಿಗಳಿಗೆ ನಡೆಯಲು ಸೂಕ್ತ ಜಾಗ ಇಲ್ಲವಾಗಿದೆ.
ಸಾರ್ವಜನಿಕರ ವಾಹನ ನಿಲ್ಲಿಸಲು ನಿಗದಿಯಾಗಿರುವ ಜಾಗದಲ್ಲೂ ಅಂಗಡಿಗಳನ್ನು ತೆರೆಯಲಾಗಿದೆ. ಈ ಕಾರಣದಿಂದ ವಾಹನ ನಿಲ್ಲಿಸಲು ಬಹಳ ತೊಂದರೆಯಾಗಿದೆ. ಇರುವ ಜಾಗದಲ್ಲಿ ವಾಹನ ನಿಲ್ಲಿಸಲು ಯತ್ನಿಸಿದರೆ, ಅಲ್ಲಿರುವ ಕೆಲವರು ದರ್ಪ ತೋರುತ್ತಾರೆ. ಸಂಚಾರ ಪೊಲೀಸರು ಈ ಬಗ್ಗೆ ಗಮನಹರಿಸಿ, ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಿ. ಈ ರಸ್ತೆ ಹಾಗೂ ಪಾದಚಾರಿ ಮಾರ್ಗವನ್ನು ಅತಿಕ್ರಮಣದಿಂದ ಮುಕ್ತಗೊಳಿಸಿ.
ಬಿ.ಎಸ್.ಮನೋಹರ್, ಬಸವನಗುಡಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.