ಬೆಂಗಳೂರು: ಆಮಂತ್ರಣ ನೀಡುವ ಸೋಗಿನಲ್ಲಿ ಮನೆಗೆ ತೆರಳಿದ್ದ ಕಳ್ಳನೊಬ್ಬ, ಸರೋಜಾ ಎಂಬುವರ ಚಿನ್ನಸರಕದ್ದುಕೊಂಡು ಪರಾರಿಯಾಗಿದ್ದಾನೆ. ಸುಬ್ರಮಣ್ಯಪುರ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.
‘ಪರಿಚಯಸ್ಥನೆಂದು ಹೇಳಿಕೊಂಡು ಮನೆಗೆ ಬಂದಿದ್ದ ಆರೋಪಿ, ಗೃಹಪ್ರವೇಶದ ಆಮಂತ್ರಣ ಪತ್ರದ ಜೊತೆ ನಕಲಿ ಬೆಳ್ಳಿ ನಾಣ್ಯವನ್ನು ಸರೋಜಾ ಅವರಿಗೆ ಕೊಟ್ಟಿದ್ದ. ಗೃಹಪ್ರವೇಶಕ್ಕೆ ಬರುವವರಿಗೆ ಚಿನ್ನದ ಪದಕ ನೀಡುವುದಾಗಿ ಹೇಳಿದ್ದ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ’ ಎಂದು ಪೊಲೀಸರು ಹೇಳಿದರು.
‘ಮಹಿಳೆಯ ಚಿನ್ನದ ಸರ ನೋಡಿದ್ದ ಆರೋಪಿ, ‘ಸರ ಚೆನ್ನಾಗಿದೆ. ಇದೇ ರೀತಿಯಲ್ಲೇ ನಾನು ಸರ ಮಾಡಿಸಬೇಕಿದೆ. ನೋಡಿ ಕೊಡುತ್ತೇನೆ’ ಎಂದು ಸರ ಪಡೆದಿದ್ದ. ಅದೇ ಸಂದರ್ಭದಲ್ಲೇ ಮನೆಗೆ ಬಂದಿದ್ದ ಗ್ಯಾಸ್ ಏಜೆನ್ಸಿ ಸಿಬ್ಬಂದಿ. ಸಿಲಿಂಡರ್ ನೀಡಿದ್ದರು. ಅದನ್ನು ಅಡುಗೆ ಮನೆಗೆ ಮಹಿಳೆ ತೆಗೆದುಕೊಂಡು ಹೋಗಿದ್ದಾಗ ಆರೋಪಿ ಪರಾರಿಯಾಗಿದ್ದಾನೆ’ ಎಂದೂ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.