ADVERTISEMENT

2018ರ ಸಿನಿಮಾ ಪ್ರಶಸ್ತಿ: ಅಧ್ಯಕ್ಷ ಸ್ಥಾನ ನಿರಾಕರಿಸಿದ ಸುಮನಾ ಕಿತ್ತೂರು

2018ರ ಸಿನಿಮಾ ಪ್ರಶಸ್ತಿ ಆಯ್ಕೆ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2019, 19:42 IST
Last Updated 18 ಫೆಬ್ರುವರಿ 2019, 19:42 IST

ಬೆಂಗಳೂರು: 2018ನೇ ಸಾಲಿನ ಕನ್ನಡ ಚಲನಚಿತ್ರ ರಾಜ್ಯ ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳಲು ನಿರ್ದೇಶಕಿ ಸುಮನಾ ಕಿತ್ತೂರು ನಿರಾಕರಿಸಿದ್ದಾರೆ. ಇದರಿಂದಾಗಿ ಸಮಿತಿಯು ಶೀಘ್ರವೇ ಕೆಲಸ ಆರಂಭಿಸುವ ವಿಚಾರದಲ್ಲಿ ಗೊಂದಲ ಸೃಷ್ಟಿಯಾಗಿದೆ.

ಸುಮನಾ ಕಿತ್ತೂರು ಅಧ್ಯಕ್ಷತೆಯಲ್ಲಿ ಸಮಿತಿಯನ್ನು ನೇಮಕ ಮಾಡಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆದೇಶ ಹೊರಡಿಸಿತ್ತು. ಇಲಾಖೆಯ ನಿರ್ದೇಶಕರು ಈ ಸಮಿತಿಯ ಸದಸ್ಯ ಕಾರ್ಯದರ್ಶಿ ಆಗಿರುತ್ತಾರೆ. ನಿರ್ಮಾಪಕ ಯಾಕೂಬ್‌ ಖಾದರ್‌ ಗುಲ್ವಾಡಿ, ನಿರ್ದೇಶಕ ಲೆಸ್ಲಿ ಕರ್ವಾಲೋ, ಲೇಖಕ ವಿ.ಲಕ್ಷ್ಮೀಪತಿ, ವಸ್ತ್ರಾಲಂಕಾರ ತಜ್ಞ ಚಿನ್ಮಯ್‌, ಛಾಯಾಗ್ರಾಹಕ ಬಿ.ಎಲ್‌. ಬಾಬು, ಸಂಕಲನಕಾರ ಎಸ್‌. ಶಿವಕುಮಾರಸ್ವಾಮಿ ಮತ್ತು ಹಿನ್ನೆಲೆ ಗಾಯಕಿ ಅರ್ಚನಾ ಉಡುಪ ಈ ಸಮಿತಿಯ ಸದಸ್ಯರು ಎಂದು ಆದೇಶದಲ್ಲಿ ಹೇಳಲಾಗಿದೆ.

ಅಧ್ಯಕ್ಷ ಸ್ಥಾನ ನಿರಾಕರಿಸಿದ್ದರ ಕುರಿತು ‘ಪ್ರಜಾವಾಣಿ’ ಸಂಪರ್ಕಿಸಿದಾಗ ಸುಮನಾ ಅವರು, ‘ಕೆಲವು ವೈಯಕ್ತಿಕ ಕೆಲಸಗಳ ಒತ್ತಡದಿಂದಾಗಿ ಈ ಜವಾಬ್ದಾರಿ ನಿಭಾಯಿಸಲು ಆಗದು ಎಂಬುದನ್ನು ನಾನು ಮೊದಲೇ ತಿಳಿಸಿದ್ದೆ. ಹೀಗಿದ್ದರೂ, ನನ್ನನ್ನು ಅಧ್ಯಕ್ಷೆ ಎಂದು ಪ್ರಕಟಿಸಲಾಗಿದೆ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.