ADVERTISEMENT

ಪದೋನ್ನತಿ ವೇಳೆ ತಪ್ಪು: ತಿದ್ದುಪಡಿ ಆದೇಶ

ಪ್ರಜಾವಾಣಿ 'ಫಲಶ್ರುತಿ'

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2019, 2:57 IST
Last Updated 21 ನವೆಂಬರ್ 2019, 2:57 IST

ಬೆಂಗಳೂರು: ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರಿಗೆ ಹಿರಿಯ ವೇತನ ಶ್ರೇಣಿಯಿಂದ ಆಯ್ಕೆ ವೇತನ ಶ್ರೇಣಿಗೆ ಪದೋನ್ನತಿ ನೀಡಿ ಆದೇಶ ಹೊರಡಿಸುವಾಗ ಆಗಿದ್ದ ತಪ್ಪನ್ನು ಸರಿಪಡಿಸಿ ಇದೀಗ ಹೊಸದಾಗಿ ತಿದ್ದುಪಡಿ ಆದೇಶ ಹೊರಡಿಸಲಾಗಿದೆ.

ಆದೇಶದಲ್ಲಿ ತಪ್ಪುಗಳು ಉಳಿದಿರುವ ಬಗ್ಗೆ ‘ಪ‍್ರಜಾವಾಣಿ’ ಇದೇ 16ರಂದು ವರದಿ ಪ್ರಕಟಿಸಿತ್ತು. ತಕ್ಷಣ ಎಚ್ಚೆತ್ತುಕೊಂಡಿರುವ ಕಾಲೇಜು ಶಿಕ್ಷಣ ಇಲಾಖೆಯಅಧಿಕಾರಿಗಳು ತಪ್ಪನ್ನು ಸರಿಪಡಿಸಿ ಆದೇಶ ಹೊರಡಿಸಿದ್ದಾರೆ.

‘ಆದೇಶದಲ್ಲಿನ ತಪ್ಪು ಹಾಗೆಯೇ ಉಳಿಯುತ್ತಿದ್ದರೆ ಹಲವಾರು ಉಪನ್ಯಾಸಕರಿಗೆ ಅನ್ಯಾಯವಾಗುತ್ತಿತ್ತು. ಆದೇಶ ರಾಜ್ಯಪತ್ರದಲ್ಲಿ ಸೇರಿದ್ದೇ ಆಗಿದ್ದರೆ ಅದನ್ನು ತಿದ್ದುಪಡಿ ಮಾಡಲು ಉಪನ್ಯಾಸಕರು ಹಲವು ತಿಂಗಳು ಅಲೆದಾಟ ನಡೆಸಬೇಕಾಗುತ್ತಿತ್ತು. ಈ ಬಗ್ಗೆ ಸಕಾಲದಲ್ಲಿವರದಿ ಪ್ರಕಟವಾದ ಕಾರಣ ಅನ್ಯಾಯವನ್ನು ಬಹುಬೇಗನೆ ಸರಿಪಡಿಸುವುದು ಸಾಧ್ಯವಾಯಿತು’ ಎಂದು ಹಲವು ಉಪನ್ಯಾಸಕರು ಪ್ರತಿಕ್ರಿಯಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.