ಬೆಂಗಳೂರು: ಕೋವಿಡ್ ನಿರ್ವಹಣೆಯಲ್ಲಿ ಮುಂಚೂಣಿಯಲ್ಲಿದ್ದು ಕೆಲಸ ಮಾಡುತ್ತಿರುವ ಸರ್ಕಾರಿ, ಸರ್ಕಾರೇತರ ಹಾಗೂ ಮಾಧ್ಯಮದ ಕೋವಿಡ್ ಸೇನಾನಿಗಳಿಗೆ ಆಸ್ಪತ್ರೆಯಲ್ಲು ಹಾಸಿಗೆ ಮೀಸಲಿರಿಸಬೇಕು ಮತ್ತು ತುರ್ತಾಗಿ ಲಸಿಕೆ ವ್ಯವಸ್ಥೆ ಮಾಡಿಸಬೇಕು ಎಂದು ಕೋವಿಡ್ ನಾಗರಿಕ ಸೇವಾಕೇಂದ್ರದ ನಿರ್ದೇಶಕ ಗಿರೀಶ ಮಟ್ಟೆಣ್ಣವರ ಸರ್ಕಾರವನ್ನು ಕೋರಿದ್ದಾರೆ.
‘ಕೋವಿಡ್ ವಿರುದ್ಧದ ಕಾರ್ಯಾಚರಣೆಯಲ್ಲಿ ಮುಂಚೂಣಿಯಲ್ಲಿರುವ ಕೊರೊನಾ ಸೇನಾನಿಗಳು ಬಹುಬೇಗ ಸೋಂಕಿಗೆ ತುತ್ತಾಗುತ್ತಿದ್ದಾರೆ. ಅವರ ಆತ್ಮವಿಶ್ವಾಸ ಹೆಚ್ಚಿಸಿ, ಅವರಿಗೆ ಮತ್ತು ಅವರ ಪರಿವಾರದ ಸದಸ್ಯರಿಗೆ ಸುರಕ್ಷತೆ ನೀಡುವುದು ಕೋವಿಡ್ ಕಾರ್ಯಾಚರಣೆಯ ಆದ್ಯ ಕರ್ತವ್ಯ’ ಎಂದೂ ಅವರು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.