ADVERTISEMENT

‘ಪೌರತ್ವ ಮಸೂದೆ: ಧರ್ಮದ ಆಧಾರದಲ್ಲಿ ದೇಶ ವಿಭಜನೆ’

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2019, 19:37 IST
Last Updated 12 ಡಿಸೆಂಬರ್ 2019, 19:37 IST
ಕಾರ್ಯಾಗಾರದಲ್ಲಿ ಎಐಡಿವೈಒ ಅಖಿಲ ಭಾರತ ಸಮಿತಿ ಅಧ್ಯಕ್ಷ ರಾಮಾಂಜನಪ್ಪ ಆಲ್ದಳ್ಳಿ (ಬಲತುದಿ) ಮತ್ತು ಹಿರಿಯ ವಕೀಲ ಪ್ರೊ.ರವಿವರ್ಮಕುಮಾರ್‌ ಚರ್ಚಿಸಿದರು. ಎಐಯುಟಿಯುಸಿ ಅಖಿಲ ಭಾರತ ಸಮಿತಿಯ ಅಧ್ಯಕ್ಷ ಕೆ. ರಾಧಾಕೃಷ್ಣ ಇದ್ದಾರೆ- --–ಪ್ರಜಾವಾಣಿ ಚಿತ್ರ
ಕಾರ್ಯಾಗಾರದಲ್ಲಿ ಎಐಡಿವೈಒ ಅಖಿಲ ಭಾರತ ಸಮಿತಿ ಅಧ್ಯಕ್ಷ ರಾಮಾಂಜನಪ್ಪ ಆಲ್ದಳ್ಳಿ (ಬಲತುದಿ) ಮತ್ತು ಹಿರಿಯ ವಕೀಲ ಪ್ರೊ.ರವಿವರ್ಮಕುಮಾರ್‌ ಚರ್ಚಿಸಿದರು. ಎಐಯುಟಿಯುಸಿ ಅಖಿಲ ಭಾರತ ಸಮಿತಿಯ ಅಧ್ಯಕ್ಷ ಕೆ. ರಾಧಾಕೃಷ್ಣ ಇದ್ದಾರೆ- --–ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಪೌರತ್ವ ತಿದ್ದುಪಡಿ ಮಸೂದೆಯು ದೇಶವನ್ನು ಧರ್ಮದ ಆಧಾರದಲ್ಲಿ ವಿಭಜಿಸಲು ಹೊಡೆಯುತ್ತಿರುವ ಅಂತಿಮ ಮೊಳೆ’ ಎಂದು ಹಿರಿಯ ವಕೀಲಪ್ರೊ.ರವಿವರ್ಮ ಕುಮಾರ್‌ ಆತಂಕ ವ್ಯಕ್ತಪಡಿಸಿದರು.

ಅಖಿಲ ಭಾರತ ಪ್ರಜಾಸತ್ತಾತ್ಮಕ ಯುವ ಸಂಘಟನೆ (ಎಐಡಿವೈಒ) ನಗರದಲ್ಲಿ ಗುರುವಾರ ಆಯೋಜಿಸಿದ್ದ ‘2019ರ ಆರ್ಥಿಕ ಬಿಕ್ಕಟ್ಟು- ಯುವಜನ’ ಕುರಿತ ರಾಜ್ಯ ಮಟ್ಟದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

‘ಧರ್ಮದ ಆಧಾರದಲ್ಲಿ ರೂಪಿಸಿರುವ ಈ ಮಸೂದೆಯು ಸಂವಿಧಾನ ವಿರೋಧಿಯಾಗಿದೆ. ದೇಶದ ಭದ್ರತೆ ಮತ್ತು ಒಕ್ಕೂಟ ವ್ಯವಸ್ಥೆಯನ್ನು ಛಿದ್ರ ಮಾಡಲಿದೆ. ಮುಸ್ಲಿಮರು ಮಾತ್ರ ಇದರಿಂದ ಅನ್ಯಾಯಕ್ಕೆ ಒಳಗಾಗಲಿದ್ದಾರೆ ಎಂದು ಭಾವಿಸಿಕೊಂಡು ಬೇರೆಯವರು ಸುಮ್ಮನಿದ್ದರೆ ಮುಂದೆ ಎಲ್ಲರೂ ತೊಂದರೆಗೆ ಸಿಲುಕುವುದು ಗ್ಯಾರಂಟಿ. ಹೀಗಾಗಿ, ಈಗಲೇ ಎಚ್ಚೆತ್ತುಕೊಳ್ಳಬೇಕು’ ಎಂದರು.

ADVERTISEMENT

‘ಕೈಗಾರಿಕೆಗಳು ಮತ್ತು ಶಾಲೆಗಳ ಬದಲಿಗೆ ಬೀದಿಗೊಂದು ಪೂಜಾ ಮಂದಿರಗಳು ನಿರ್ಮಾಣವಾಗುತ್ತಿವೆ. ನಿರುದ್ಯೋಗದ ವಿರುದ್ಧ ಚಳವಳಿ ಬಲಿಷ್ಠವಾಗಿ ನಡೆಯಬೇಕಿದ್ದು, ಜೈಲಿಗೆ ಹೋಗಲು ಯುವಜನರು ಸಜ್ಜಾಗಬೇಕು’ ಎಂದು ತಿಳಿಸಿದರು.

‘ಹೈದರಾಬಾದ್‌ನಲ್ಲಿ ಅತ್ಯಾಚಾರ ಪ್ರಕರಣದ ಆರೋಪಿಗಳನ್ನು ಪೊಲೀಸರು ಗುಂಡಿಟ್ಟು ಹತ್ಯೆ ಮಾಡಿರುವುದು ಅಪಾಯಕಾರಿ ಬೆಳವಣಿಗೆ. ಪೊಲೀಸರೇ ಶಿಕ್ಷೆ ಕೊಡುವುದಾದರೆ ನ್ಯಾಯಾಂಗದ ಕೆಲಸ ಏನು’ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.