ADVERTISEMENT

ಆಸ್ಪತ್ರೆ ಸೇರಿದ ಕೆಲವೇ ನಿಮಿಷದಲ್ಲಿ ಸಾವು: ಆಕ್ರೋಶ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2019, 19:37 IST
Last Updated 10 ಆಗಸ್ಟ್ 2019, 19:37 IST
ಆಸ್ಪತ್ರೆ ಮುಂದೆ ರೋದಿಸುತ್ತಿರುವ ರಾಜಶೇಖರ್ ಪತ್ನಿ, ತಾಯಿ, ಸಂಬಂಧಿಕರು
ಆಸ್ಪತ್ರೆ ಮುಂದೆ ರೋದಿಸುತ್ತಿರುವ ರಾಜಶೇಖರ್ ಪತ್ನಿ, ತಾಯಿ, ಸಂಬಂಧಿಕರು   

ಕೆಂಗೇರಿ: ಎದೆ ನೋವು ಎಂದು ಸರ್ಕಾರಿ ಆಸ್ಪತ್ರೆಗೆ ದಾಖಲಾದ ವ್ಯಕ್ತಿ ಕೆಲವೇ ನಿಮಿಷಗಳಲ್ಲಿ ಮೃತಪಟ್ಟ ಹಿನ್ನೆಲೆಯಲ್ಲಿ ಆತನ ಸಂಬಂಧಿಕರು ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕೆಂಗೇರಿ ಬಳಿಯ ವಂಡರ್ ಬ್ಲೂ ಗಾರ್ಮೆಂಟ್ಸ್‌ನಲ್ಲಿ ಟೈಲರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ರಾಜಶೇಖರ್(27) ಮೃತಪಟ್ಟವರು. ಶನಿವಾರ ಗಾರ್ಮೆಂಟ್ಸ್‌ಗೆ ತೆರಳಿದ್ದ ರಾಜಶೇಖರ್, ಕಾರ್ಯನಿರ್ವಹಿಸುವ ವೇಳೆ ಎದೆ ಭಾಗದಲ್ಲಿ ತೀವ್ರ ನೋವು ಕಾಣಿಸಿಕೊಂಡಾಗ, ಗಾರ್ಮೆಂಟ್ಸ್‌ ಸಿಬ್ಬಂದಿ ಕೂಡಲೇ ಅವರನ್ನು ಆಂಬುಲೆನ್ಸ್‌ನಲ್ಲಿ ಕೆಂಗೇರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ದಾಖಲಿಸಿದರು.

‘ವೈದ್ಯರು ಸೂಕ್ತ ಚಿಕಿತ್ಸೆ ನೀಡದ ಕಾರಣ ರಾಜಶೇಖರ್‌ ಮೃತಪಟ್ಟಿದ್ದಾರೆ’ ಎಂದು ಸಂಬಂಧಿಕರು ದೂರಿದರು. ಈ ವೇಳೆ ಮಾತಿನ ಚಕಮಕಿ ನಡೆಯಿತು.

ADVERTISEMENT

‘ರೋಗಿಯ ಸ್ಥಿತಿ ಗಮನಿಸಿ, ಎದೆನೋವಿಗೆ ಚಿಕಿತ್ಸೆ ನೀಡಲು ಮುಂದಾಗಿದ್ದೆವು. ಆದರೆ, ಅವರಿಗೆ ತೀವ್ರ ಹೃದಯಾಘಾತ ಸಂಭವಿಸಿದ ಪರಿಣಾಮ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದರು’ ಎಂದುವೈದ್ಯೆ ಡಾ. ಸುಮಾ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.