ಬೆಂಗಳೂರು: ಆದಾಯ ತೆರಿಗೆ ಇಲಾಖೆಯ ಕರ್ನಾಟಕ ಮತ್ತು ಗೋವಾ ವಲಯದ ಪ್ರಧಾನ ಮುಖ್ಯ ಆಯುಕ್ತರಾಗಿ ಭಾರತೀಯ ಕಂದಾಯ ಸೇವೆಯ 1986ನೇ ಬ್ಯಾಚ್ನ ಅಧಿಕಾರಿ ದಿನೇಶ್ ಚಂದ್ರ ಪಟ್ವಾರಿ ಬುಧವಾರ ಅಧಿಕಾರ ಸ್ವೀಕರಿಸಿದರು.
ಈ ಮೊದಲು ಅವರು ಇಲಾಖೆಯ ತಮಿಳುನಾಡು ಮತ್ತು ಪುದುಚೇರಿ ವಲಯದ ತನಿಖಾ ವಿಭಾಗದ ಮಹಾನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಕರ್ನಾಟಕ ಮತ್ತು ಗೋವಾ ವಲಯದ ಪ್ರಧಾನ ಮುಖ್ಯ ಆಯುಕ್ತರ ಹುದ್ದೆಯ ಜತೆ ಹೆಚ್ಚುವಾರಿಯಾಗಿ ಹಿಂದಿನ ಹುದ್ದೆಯನ್ನೂ ಅವರಿಗೆ ನೀಡಲಾಗಿದೆ ಎಂದು ಆದಾಯ ತೆರಿಗೆ ಇಲಾಖೆಯ ಪ್ರಕಟಣೆ ತಿಳಿಸಿದೆ.
ದಿನೇಶ್ ಚಂದ್ರ ಪಟ್ವಾರಿ ಅವರು ಈ ಹಿಂದೆ ರಾಜ್ಕೋಟ್, ಬರೋಡಾ, ಅಹ್ಮದಾಬಾದ್, ಬರೋಡಾ ಮತ್ತು ಜೈಪುರಗಳಲ್ಲಿ ಆದಾಯ ತೆರಿಗೆ ಇಲಾಖೆಯ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.