ADVERTISEMENT

ಸಾವಿನಲ್ಲೂ ಒಂದಾದ ರೈತ ದಂಪತಿ!

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2019, 19:15 IST
Last Updated 8 ಅಕ್ಟೋಬರ್ 2019, 19:15 IST
   

ಬಳ್ಳಾರಿ: ತಾಲೂಕಿನ ಶ್ರೀಧರಗಡ್ಡೆ ಗ್ರಾಮದಲ್ಲಿ ವಿಜಯದಶಮಿಯ ದಿನವಾದ ಮಂಗಳವಾರ ಮೃತಪಟ್ಟ ರೈತ ಕಟ್ಟೆಬಸಪ್ಪ (60) ಅವರ ಮೃತದೇಹದ ಮುಂದೆ ಅಳುತ್ತಲೇ ಅವರ ಪತ್ನಿ ಈರಮ್ಮ (52) ಕೂಡ ಮೃತಪಟ್ಟರು.

ಅನಾರೋಗ್ಯಪೀಡಿತರಾಗಿದ್ದ ಕಟ್ಟೆಬಸಪ್ಪ ಬೆಳಿಗ್ಗೆ ಮೃತಪಟ್ಟಿದ್ದರು. ಅವರ ಸಾವಿನಿಂದ ಕಂಗಾಲಾಗಿದ್ದ ಈರಮ್ಮ ಕೂಡ ಪತಿಯ ಶವದ ಬಳಿಯೇ ಮೃತಪಟ್ಟಿದ್ದರಿಂದ ಇಡೀ ಗ್ರಾಮ ಶೋಕದಲ್ಲಿ ಮುಳುಗಿತ್ತು. ದಂಪತಿಗೆ ಪುತ್ರರು, ಪುತ್ರಿಯರು ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT