ಪೀಣ್ಯದಾಸರಹಳ್ಳಿ: ಹೆಗ್ಗನಹಳ್ಳಿ ವಾರ್ಡ್ನ ಸಂಜೀವಿನಿ ನಗರದ ಜನವಸತಿ ಪ್ರದೇಶದಲ್ಲಿ ಸುಮಾರು ತಿಂಗಳಿಂದ ಕಸ ಸುರಿಯಲಾಗುತ್ತಿದ್ದು, ಸಮಸ್ಯೆಯಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.
‘ಸಾರ್ವಜನಿಕರು ರಾತ್ರೋರಾತ್ರಿ ಕಸ ತಂದು ಹಾಕುತ್ತಿದ್ದಾರೆ. ಬಿಡಾಡಿ ಹಸುಗಳು ಹಾಗೂ ಬೀದಿನಾಯಿಗಳು ಕಸವನ್ನು ಚೆಲ್ಲಾಡುತ್ತವೆ. ಮಳೆಗಾಲ ಇರುವುದರಿಂದ ಕಸ ನೀರಿನಲ್ಲಿ ಕೊಳೆತು ಗಬ್ಬು ವಾಸನೆ ಬರುತ್ತಿದೆ. ಸಾಂಕ್ರಾಮಿಕ ರೋಗಗಳು ಹರಡುತ್ತಿವೆ’ ಎಂದು ನಿವಾಸಿಗಳು ಅಳಲು ತೋಡಿಕೊಳ್ಳುತ್ತಾರೆ.
'ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸುತ್ತಿಲ್ಲ, ಜನಪ್ರತಿನಿಧಿಗಳನ್ನು ಹೇಳುವವರು, ಕೇಳುವವರು ಯಾರೂ ಇಲ್ಲದಂತಾಗಿದ್ದು ಜನರ ಸಮಸ್ಯೆ ಆಲಿಸುವವರು ಯಾರು'? ಎಂದು ಸ್ಥಳೀಯ ನಿವಾಸಿ ವಿಕಾಸ್ ಆಕ್ರೋಶ ವ್ಯಕ್ತಪಡಿಸುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.