ಚಿಕ್ಕಬಳ್ಳಾಪುರ: ನಗರದ ಉಪನ್ಯಾಸಕರೊಬ್ಬರು ತಮ್ಮ ಹೊಸ ಮನೆಯ ಗೃಹಪ್ರವೇಶದಲ್ಲಿ ಉಡುಗೊರೆ ರೂಪದಲ್ಲಿ ಬಂದ ಹಣವನ್ನು ನೆರೆ ಸಂತ್ರಸ್ತರ ನೆರವಿಗಾಗಿ ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಪ್ರಶಾಂತ ನಗರದ ನಿವಾಸಿ, ಕಾಲೇಜು ಉಪನ್ಯಾಸಕ ರಾಮಾಂಜಿನಪ್ಪ ಹಾಗೂ ರೂಪಶ್ರೀ ದಂಪತಿ ಇತ್ತೀಚೆಗೆ ನಡೆದ ತಮ್ಮ ಹೊಸ ಮನೆಯ ಗೃಹಪ್ರವೇಶದಲ್ಲಿ ಆಪ್ತೇಷ್ಟರಿಂದ ಬಂದ ₹38 ಸಾವಿರ ಉಡುಗೊರೆ ಮೊತ್ತದೊಂದಿಗೆ ಸ್ವಂತದ ₹2 ಸಾವಿರ ಸೇರಿಸಿ ಒಟ್ಟು ₹40 ಸಾವಿರ ಹಣದ ಡಿಡಿ ಮಾಡಿಸಿ ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.