ADVERTISEMENT

ಬಿಜೆಪಿಗೆ ಹಲವರ ಸೇರ್ಪಡೆ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2023, 4:48 IST
Last Updated 6 ಫೆಬ್ರುವರಿ 2023, 4:48 IST
   

ಬೆಂಗಳೂರು: ‘ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರವು 9 ವರ್ಷ ಅಭಿವೃದ್ಧಿ ಕಂಡಿರಲಿಲ್ಲ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಕ್ಷೇತ್ರವು ಅಭಿವೃದ್ದಿ ಪಥದತ್ತ ಸಾಗುತ್ತಿದೆ’ ಎಂದು ಸಚಿವ ವಿ.ಸೋಮಣ್ಣ ಹೇಳಿದರು.

ವಿವಿಧ ಕಾರ್ಯಕರ್ತರನ್ನು ಪಕ್ಷಕ್ಕೆ ಸ್ವಾಗತಿಸಿ ಅವರು ಮಾತನಾಡಿದರು.

’ಜನರಿಗೆ ದ್ರೋಹ ಮಾಡುವ ಕೆಲಸ ಮಾಡಬಾರದು. ರಾಜಕೀಯ ನಿಂತ ನೀರಲ್ಲ. ಜನರು ಅಧಿಕಾರ ಕೊಟ್ಟಾಗ ಜನರ ಸೇವೆ ಮಾಡುವ ಕೆಲಸ ಮಾಡಬೇಕು. ಈ ನಾಲ್ಕು ಮೂಕ್ಕಾಲು ವರ್ಷ ಕ್ಷೇತ್ರ ಸಾಧಿಸಿದ ಅಭಿವೃದ್ಧಿ ಸಾಧನೆ ಬಗ್ಗೆ ಚರ್ಚಿಸಲು ಎಲ್ಲರಿಗೂ ಮುಕ್ತ ಅವಕಾಶ ಇದೆ’ ಎಂದರು.

ADVERTISEMENT

‘ಚುನಾವಣೆ ಹತ್ತಿರ ಬರುತ್ತಿದೆ. ಹಣ ಹಂಚಿ ಸುಳ್ಳು ಹೇಳುವವರು ನಿಮ್ಮ ಮುಂದೆ ಬರುತ್ತಾರೆ. ಹಣದ ಆಮಿಷ ತೋರಿಸುವವರ ಸಾಧನೆಗಳನ್ನು‌ ಪ್ರಬುದ್ಧ ಮತದಾರರು ಕೇಳಬೇಕು. ಬಸವೇಶ್ವರ ಆದರ್ಶ ಆಳವಡಿಸಿಕೊಂಡು ಎಲ್ಲ ವರ್ಗ, ಧರ್ಮ ದವರು ಜೊತೆ ನಾನು ಬಾಳುತ್ತಿದ್ದೇನೆ’ ಎಂದು ಹೇಳಿದರು.

ಮುಖಂಡ ಡಾ.ಅರುಣ್ ಸೋಮಣ್ಣ, ಗೋವಿಂದರಾಜನಗರ ಮಂಡಲ ಅಧ್ಯಕ್ಷ ವಿಶ್ವನಾಥಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.