ಬೆಂಗಳೂರು: ನಮ್ಮ ಮೆಟ್ರೊ ಹಸಿರು ಮಾರ್ಗದ ಮೊದಲ ಆರು ಬೋಗಿಯ ಮೆಟ್ರೊ ರೈಲು ಸಂಚಾರಕ್ಕೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಸೋಮವಾರ ಚಾಲನೆ ನೀಡಿದರು.
ನೇರಳೆ ಮಾರ್ಗದಲ್ಲೂ ಆರು ಬೋಗಿಗಳ ಮತ್ತೆರಡು ರೈಲುಗಳು ಸೋಮವಾರ ಸಂಚಾರ ಆರಂಭಿಸಿವೆ. ಇದರೊಂದಿಗೆ ಮೆಟ್ರೊ ಜಾಲದಲ್ಲಿ ಆರು ಬೋಗಿಗಳ ಒಟ್ಟು 6 ರೈಲುಗಳು ಸಂಚಾರ ಆರಂಭಿಸಿದಂತಾಗಿದೆ.ಈ ಹಿಂದೆ ದಟ್ಟಣೆ ಅವಧಿಯಲ್ಲಿ ಮೂರು ರೈಲುಗಳು ನೇರಳೆ ಮಾರ್ಗದಲ್ಲಿ ಸಂಚರಿಸುತ್ತಿದ್ದವು.
ಭಾನುವಾರ ರಾತ್ರಿ ಶ್ರೀರಾಂಪುರ ನಿಲ್ದಾಣದಲ್ಲಿ ಮಗುವೊಂದು ಎಸ್ಕಲೇಟರ್ ನಿಂದ ಬಿದ್ದು ಮೃತಪಟ್ಟ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, 'ಇದು ಆಕಸ್ಮಿಕ ಘಟನೆ. ಮೆಟ್ರೊ ನಿಗಮದ ಲೋಪವಲ್ಲ. ಮೆಟ್ರೊದಲ್ಲಿ ಸಂಚರಿಸುವಾಗ ಮಕ್ಕಳ ಬಗ್ಗೆ ಪೋಷಕರು ಎಚ್ಚರವಹಿಸಬೇಕು' ಎಂದರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.