ADVERTISEMENT

ಗುರುರಾಜ ಕರಜಗಿಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2018, 19:41 IST
Last Updated 22 ಅಕ್ಟೋಬರ್ 2018, 19:41 IST
ತ್ಯಾಮಗೊಂಡ್ಲುವಿನ ಸಾರ್ವಜನಿಕ ಶೌಚಾಲಯ
ತ್ಯಾಮಗೊಂಡ್ಲುವಿನ ಸಾರ್ವಜನಿಕ ಶೌಚಾಲಯ   

ಬೆಂಗಳೂರು: ಶಿಕ್ಷಣ ಕ್ಷೇತ್ರದಲ್ಲಿ ಗುರುರಾಜ ಕರಜಗಿ ಅವರನ್ನು ‘ಮರಿದೇವರು ಪ್ರತಿಷ್ಠಾನ ದತ್ತಿ ಪ್ರಶಸ್ತಿ’ಗೆ ಆಯ್ಕೆ ಮಾಡಲಾಗಿದೆ.

ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಮನು ಬಳಿಗಾರ್‌ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಆಯ್ಕೆ ಸಮಿತಿ ಸಭೆಯಲ್ಲಿ ಆರು ಸಾಧಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು.

ಡಾ.ಚಂದ್ರಶೇಖರ ತಾಳ್ಯ (ಸಾಹಿತ್ಯ), ಶ್ರೀಮತಿ ಗಂಗಮ್ಮ ಕೊಪ್ಪಳ (ಸಂಗೀತ), ರಾಜಶೇಖರ ನಿಂಬರಗಿ (ಕೃಷಿ ಹಾಗೂ ನೀರಾವರಿ), ಡಾ.ಸೋ.ಮು.ಭಾಸ್ಕರಾಚಾರ್‌ (ಕನ್ನಡ ಸೇವೆ), ಬಿ.ಸಿ.ರಮೇಶ್‌ (ಕಬಡ್ಡಿ) ಇವರು 2018ರ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ADVERTISEMENT

ನವೆಂಬರ್‌ 20 ರಂದು ಸಂಜೆ 5ಕ್ಕೆ, ನಗರದ ಕನ್ನಡ ಸಾಹಿತ್ಯ ಪರಿಷತ್‌, ಕೃಷ್ಣರಾಜ ಪರಿಷನ್ಮಂದಿರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಪ್ರಶಸ್ತಿ ಮೊತ್ತ ತಲಾ ₹15 ಸಾವಿರ ನಗದು ಹಾಗೂ ಫಲಕ ಒಳಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.