ADVERTISEMENT

ಉದ್ಯೋಗ ಸೃಷ್ಟಿ: ಸರ್ಕಾರದ್ದಷ್ಟೇ ಹೊಣೆಯಲ್ಲ: ಸಚಿವ ಎ. ನಾರಾಯಣಸ್ವಾಮಿ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2021, 21:53 IST
Last Updated 28 ಅಕ್ಟೋಬರ್ 2021, 21:53 IST
ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿದರು. ಬೆಂಗಳೂರು ನಗರ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಲಿಂಗರಾಜ ಗಾಂಧಿ, ಪಿವಿಪಿ ಕಾಯದರ್ಶಿ ಕೃಷ್ಣಮೂರ್ತಿ, ಎಸ್.ಮರಿಸ್ವಾಮಿ, ಬಿ.ಎನ್.ಉಮೇಶ್, ಪಿ.ಎಲ್ ನಂಜುಂಡಸ್ವಾಮಿ, ಎಸ್.ಶಿವಮಲ್ಲು, ಡಾ.ಎಂ.ಮಹದೇವ್ ಇದ್ದರು
ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿದರು. ಬೆಂಗಳೂರು ನಗರ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಲಿಂಗರಾಜ ಗಾಂಧಿ, ಪಿವಿಪಿ ಕಾಯದರ್ಶಿ ಕೃಷ್ಣಮೂರ್ತಿ, ಎಸ್.ಮರಿಸ್ವಾಮಿ, ಬಿ.ಎನ್.ಉಮೇಶ್, ಪಿ.ಎಲ್ ನಂಜುಂಡಸ್ವಾಮಿ, ಎಸ್.ಶಿವಮಲ್ಲು, ಡಾ.ಎಂ.ಮಹದೇವ್ ಇದ್ದರು   

ಕೆಂಗೇರಿ: ‘ಉದ್ಯೋಗ ಸೃಷ್ಟಿ ವಿಷಯದಲ್ಲಿ ಸರ್ಕಾರ ಮಾತ್ರ ಜವಾಬ್ದಾರಿ ವಹಿಸಬೇಕು ಎಂದು ಬಯಸುವುದು ಸಲ್ಲದು. ಯುವಕರು ಸಹ ಉದ್ಯೋಗ ಸೃಷ್ಟಿಗೆ ಮುಂದಾಗಬೇಕು. ಆಗ ಮಾತ್ರ ನಿರುದ್ಯೋಗ ಸಮಸ್ಯೆಗೆ ಇತಿಶ್ರೀ ಹಾಡಬಹುದು’ ಎಂದು ಎಂದು ಕೇಂದ್ರ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಸಚಿವ ಎ. ನಾರಾಯಣಸ್ವಾಮಿ ಹೇಳಿದರು.

ಅಂಬೇಡ್ಕರ್ ತಾಂತ್ರಿಕ ಮಹಾವಿದ್ಯಾಲದಲ್ಲಿ ಗುರುವಾರ ಆಯೋಜಿಸಲಾಗಿದ್ದ 7 ಮತ್ತು 8ನೇವರ್ಷದ ಘಟಿಕೋತ್ಸವ ಕಾರ್ಯಕ್ರಮದಲ್ಲಿ 116 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಅವರು ಮಾತನಾಡಿದರು.

‘ಪದವಿ ಎನ್ನುವುದು ಉದ್ಯೋಗ ಖಾತ್ರಿಯ ಪ್ರಮಾಣ ಪತ್ರವಲ್ಲ. ಕಾಲಘಟ್ಟಕ್ಕೆ ಪೂರಕವಾಗಿ ಕೌಶಲ ಬೆಳೆಸಿಕೊಳ್ಳಬೇಕು’ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ADVERTISEMENT

‘ದೇಶದಲ್ಲಿ ದಲಿತರ ಸ್ಥಿತಿ ಇಂದಿಗೂ ಶೋಚನೀಯವಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಶಿಕ್ಷಣವು ಜ್ಞಾನಾರ್ಜನೆಗೆ ಮೀಸಲಾಗಬಾರದು. ಸಾಮಾಜಿಕ ಕಳಕಳಿ, ನೈತಿಕತೆ ಹಾಗೂ ಮೌಲ್ಯಗಳನ್ನು ಜಾಗೃತಗೊಳಿಸಬೇಕು’ ಎಂದು ಬೆಂಗಳೂರು ನಗರ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಲಿಂಗರಾಜ ಗಾಂಧಿ ಹೇಳಿದರು.

ಪಿವಿಪಿ ಕಾಯದರ್ಶಿ ಕೃಷ್ಣಮೂರ್ತಿ, ಟ್ರಸ್ಟಿಗಳಾದ ಎಸ್.ಮರಿಸ್ವಾಮಿ, ಬಿ.ಎನ್.ಉಮೇಶ್, ಪಿ.ಎಲ್ ನಂಜುಂಡಸ್ವಾಮಿ, ಎಸ್.ಶಿವಮಲ್ಲು, ಡಾ.ಎಂ.ಮಹದೇವ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.