ADVERTISEMENT

ಪದ್ಮಿನಿ ನಾಗರಾಜು ಸಾಹಿತ್ಯ ಪರಿಷತ್‌ ಕಾರ್ಯದರ್ಶಿ

​ಪ್ರಜಾವಾಣಿ ವಾರ್ತೆ
Published 19 ಜನವರಿ 2023, 23:10 IST
Last Updated 19 ಜನವರಿ 2023, 23:10 IST
ಪದ್ಮಿನಿ ನಾಗರಾಜು
ಪದ್ಮಿನಿ ನಾಗರಾಜು   

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ದರ್ಶಿಯಾಗಿ ಸಾಹಿತಿ, ರಾಣಿ ಸರಳಾದೇವಿ ಪದವಿ ಕಾಲೇಜಿನಪ್ರಾಂಶುಪಾಲರಾದ ಡಾ.ಪದ್ಮಿನಿ ನಾಗರಾಜು ಅವರು ನೇಮಕವಾಗಿದ್ದಾರೆ.

‘ಪರಿಷತ್ತಿನ ಕಾರ್ಯಕಾರಿ ಸಮಿತಿಯ ಮಹಿಳಾ ಪ್ರತಿನಿಧಿಯಾಗಿ ಅವರು ಇದುವರೆಗೂ ಕಾರ್ಯನಿರ್ವಹಿಸುತ್ತಿದ್ದರು. ಸಾಹಿತ್ಯ, ಶಿಕ್ಷಣ, ಮಹಿಳಾ ಪರ, ಸಾಂಸ್ಕೃತಿಕ ವಲಯದಲ್ಲಿ ಕೆಲಸ ಮಾಡುತ್ತಿರುವ ಅವರಿಗೆ ಪರಿಷತ್ತಿನ ಮಹತ್ವದ ಸ್ಥಾನ ನೀಡಲಾಗಿದೆ’ ಎಂದು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ ಜೋಷಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT