ADVERTISEMENT

ಕೆಂಗೇರಿ ಬಳಿ ಅಪಘಾತ: ಯುವಕ ಸಾವು

​ಪ್ರಜಾವಾಣಿ ವಾರ್ತೆ
Published 3 ಜುಲೈ 2025, 19:00 IST
Last Updated 3 ಜುಲೈ 2025, 19:00 IST
<div class="paragraphs"><p>ಅಪಘಾತ</p></div>

ಅಪಘಾತ

   

–ಪ್ರಾತಿನಿಧಿಕ ಚಿತ್ರ

ಬೆಂಗಳೂರು: ಮೈಸೂರು ಮುಖ್ಯರಸ್ತೆಯ ಕೆಂಗೇರಿ ಬಳಿ ಸರಕು ಸಾಗಣೆ ವಾಹನ ಹಾಗೂ ದ್ವಿಚಕ್ರ ವಾಹನದ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಯುವಕ ಮೃತಪಟ್ಟಿದ್ದಾರೆ.

ADVERTISEMENT

ರಾಮನಗರ ಜಿಲ್ಲೆಯ ಹೆಜ್ಜಾಲದ ಬಿ.ವಿನಯ್‌ (19) ಮೃತಪಟ್ಟವರು.

‘ವಿನಯ್ ಅವರು ಬುಧವಾರ ಸಂಜೆ ಕೆಂಗೇರಿ ಕಡೆಯಿಂದ ಬಿಡದಿಯ ಕಡೆಗೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದರು. ಎಂಪರೆರ್‌ ಲೆಗಸಿ ಹೋಟೆಲ್‌ ಎದುರು ಹಿಂದಿನಿಂದ ವೇಗವಾಗಿ ಬಂದ, ವಿಆರ್‌ಎಲ್‌ ಸರಕು ಸಾಗಣೆ ವಾಹನವು ಡಿಕ್ಕಿ ಹೊಡೆದು, ಸವಾರರನ್ನು 20 ಮೀಟರ್ ದೂರಕ್ಕೆ ಎಳೆದುಕೊಂಡು ಹೋಗಿತ್ತು. ವಿನಯ್ ಅವರ ಮುಖ, ತಲೆ, ಕೈಕಾಲುಗಳಿಗೆ ತೀವ್ರ ಸ್ವರೂಪದಲ್ಲಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟರು’ ಎಂದು ಸಂಚಾರ ಪೊಲೀಸರು ಹೇಳಿದರು.

ಚಾಲಕ ಮಹೇಶ್ (32) ವಿರುದ್ಧ ಕೆಂಗೇರಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.