ADVERTISEMENT

ಬೆಂಗಳೂರು: ‘ಸಂಪ್ರಭಾ’ ವತಿಯಿಂದ ಅಂಗಾಂಗ ದಾನದ ಬಗ್ಗೆ ಉಪನ್ಯಾಸ

​ಪ್ರಜಾವಾಣಿ ವಾರ್ತೆ
Published 15 ಜೂನ್ 2025, 16:32 IST
Last Updated 15 ಜೂನ್ 2025, 16:32 IST
   

ಬೆಂಗಳೂರು: ಕೇಂದ್ರೀಯ ಜಿಎಸ್‌ಟಿ ಮತ್ತು ಸೀಮಾಶುಲ್ಕ ಇಲಾಖೆಯ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘ ‘ಸಂಪ್ರಭಾ’ ವತಿಯಿಂದ ಕೇಂದ್ರ ಕಂದಾಯ ಇಲಾಖೆಯ ಕಚೇರಿಯಲ್ಲಿ ರಕ್ತದಾನ ಶಿಬಿರ ಮತ್ತು ಅಂಗಾಂಗ ದಾನದ ಬಗ್ಗೆ ಉಪನ್ಯಾಸ ಆಯೋಜಿಸಲಾಗಿತ್ತು.

50 ಜನರು ರಕ್ತದಾನ ಮಾಡಿದರು. ಬೌರಿಂಗ್‌ ಮತ್ತು ಲೇಡಿ ಕರ್ಜನ್‌ ವೈದ್ಯಕೀಯ ಸಂಸ್ಥೆಯ ವೈದ್ಯಕೀಯ ತಂಡದವರು ನೆರವು ನೀಡಿದರು. ಅಂಗಾಂಗ ದಾನದ ಬಗ್ಗೆ ಎಸ್‌ಐಎಂಎಸ್‌ನ ವಿಧಿ ವಿಜ್ಞಾನ ವಿಭಾಗದ ಡಾ. ಪಿ.ಕೆ. ದೇವದಾಸ್‌ ಉಪನ್ಯಾಸ ನೀಡಿದರು. ಸಂಪ್ರಭಾ ಅಧ್ಯಕ್ಷ ಜಿ. ನಾರಾಯಣಸ್ವಾಮಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT