ADVERTISEMENT

ಬೆಂಗಳೂರು: ಮೊಬೈಲ್‌ ಜಗಳ ಕೊಲೆಯಲ್ಲಿ ಅಂತ್ಯ

​ಪ್ರಜಾವಾಣಿ ವಾರ್ತೆ
Published 7 ಮೇ 2025, 16:17 IST
Last Updated 7 ಮೇ 2025, 16:17 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ಕಳ್ಳತನ ಮಾಡಿದ್ದ ಮೊಬೈಲ್‌ ಹಿಂದಿರುಗಿಸುವ ವಿಚಾರಕ್ಕೆ ನಡೆದ ಜಗಳ ಮೆಕ್ಯಾನಿಕ್‌ ಎಂಜಿನಿಯರ್‌ವೊಬ್ಬರ ಕೊಲೆಯಲ್ಲಿ ಅಂತ್ಯವಾಗಿದೆ.

ಬಿಹಾರ ಮೂಲದ ಅಬ್ದುಲ್‌ ಮಲೀಕ್‌ (52) ಮೃತಪಟ್ಟವರು. 

ADVERTISEMENT

ಈ ಬಗ್ಗೆ ಮಾಗಡಿ ರಸ್ತೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಮನೋಜ್‌ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

‘ಮಾಗಡಿ ರಸ್ತೆ ಪೊಲೀಸ್ ಠಾಣಾ ವ್ಯಾಪ್ತಿಯ ರಾಜಾಜಿನಗರ ಕೈಗಾರಿಕಾ ಪ್ರದೇಶದಲ್ಲಿ ನಡೆದ ಜಗಳದಲ್ಲಿ ಅಬ್ದುಲ್‌ ಮಲೀಕ್‌ ಮೃತಪಟ್ಟಿದ್ದಾನೆ. ಅವರ ಸಹಾಯಕ ಜೈನುಲ್‌ ಗಂಭೀರವಾಗಿ ಗಾಯಗೊಂಡಿದ್ದಾರೆ. ಅಬ್ದುಲ್ ಮಲೀಕ್‌ ಮತ್ತು ಜೈನುಲ್‌ ಅವರು ಐದು ವರ್ಷಗಳಿಂದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು’ ಎಂದು ಹೇಳಿದರು.

ಆರೋಪಿ ಮನೋಜ್‌ ‘ಪೋರ್ಟರ್‌’ ಕಂಪನಿಯಲ್ಲಿ ಡೆಲಿವರಿ ಏಜೆಂಟ್‌ ಆಗಿ ಕೆಲಸ ಮಾಡುತ್ತಿದ್ದ. ಅಬ್ದುಲ್‌ ಮಲೀಕ್‌ ಅವರ ಕಚೇರಿಗೆ ತೆರಳಿದ್ದ ಮನೋಜ್‌ ಮೊಬೈಲ್‌ವೊಂದನ್ನು ಕಳ್ಳತನ ಮಾಡಿದ್ದ. ಈ ದೃಶ್ಯವನ್ನು ಅಬ್ದುಲ್‌ ಮಲೀಕ್‌ ಮತ್ತು ಜೈನುಲ್‌ ಸಿಸಿಟಿವಿಯಲ್ಲಿ ನೋಡಿದ್ದರು. ಮೊಬೈಲ್‌ ಹಿಂದಿರುಗಿಸುವಂತೆ ಮನೋಜ್‌ಗೆ ಒತ್ತಾಯಿಸಿದರು. ಆದರೆ ಆರೋಪಿ ಮೊಬೈಲ್‌ ನೀಡದೇ ಅಬ್ದುಲ್‌ ಮಲೀಕ್‌ ಮತ್ತು ಜೈನುಲ್‌ ಮೇಲೆ ಹಲ್ಲೆ ನಡೆಸಿದ್ದಾನೆ. ನಂತರ ಅಬ್ದುಲ್‌ ಮಲೀಕ್‌ಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಜೈನುಲ್‌ಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.