ಬೆಂಗಳೂರು: ಟ್ಯಾನರಿ ರಸ್ತೆಯಲ್ಲಿ ಮಾರ್ಚ್ 23ರಂದು ನಡೆದಿದ್ದ ಮೆಕ್ಯಾನಿಕ್ ಸಲೀಂವುಲ್ಲಾ ಷರೀಫ್ (27) ಕೊಲೆ ಪ್ರಕರಣ ಸಂಬಂಧ ಕಾಡುಗೊಂಡನಹಳ್ಳಿ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.
ಕೆ.ಜಿ.ಹಳ್ಳಿಯ ಸೈಯದ್ ಮುನೀರ್ (32), ಸೈಯದ್ ಶಹಬಾದ್ (31), ಸೈಯದ್ ಹಿದಾಯತ್ (34) ಹಾಗೂ ಶೋಯಬ್ ಖಾನ್ (33) ಬಂಧಿತರು.
2018ರಲ್ಲಿ ಟ್ಯಾನರಿ ರಸ್ತೆಯಲ್ಲಿ ನಡೆದ ಸಮುದಾಯ ಕಾರ್ಯಕ್ರಮಕ್ಕೆ ಸ್ನೇಹಿತರೊಂದಿಗೆ ಹೋಗಿದ್ದ ಮುನೀರ್, ಜೋರಾಗಿ ಸಂಗೀತ ಹಾಕುವಂತೆ ಷರೀಫ್ಗೆ ಹೇಳಿದ್ದ. ಅದಕ್ಕೆ ನಿರಾಕರಿಸಿದ್ದ ಆತ, ‘ಇದು ನಮ್ಮ ಏರಿಯಾದ ಕಾರ್ಯಕ್ರಮ. ನೀನು ಹೇಳಿದಂತೆಲ್ಲ ಕೇಳಲು ಆಗುವುದಿಲ್ಲ. ಬಾಲ ಬಿಚ್ಚಿದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ’ ಎಂದು ಧಮ್ಕಿ ಹಾಕಿದ್ದ.
ಇದೇ ವಿಚಾರವಾಗಿ ನಂತರದ ದಿನಗಳಲ್ಲೂ ಪರಸ್ಪರರ ನಡುವೆ 2 ಬಾರಿ ಜಗಳಗಳು ನಡೆದಿದ್ದವು. ಅದೇ ದ್ವೇಷದಲ್ಲಿ ಷರೀಫ್ನನ್ನು ಮುಗಿಸಲು ಸಂಚು ರೂಪಿಸಿದ ಮುನೀರ್ಗೆ, ಆತನ ಸ್ನೇಹಿತರ ನೆರವೂ ಸಿಕ್ಕಿತ್ತು.
ಮಾರ್ಚ್ 23ರ ಸಂಜೆ 7 ಗಂಟೆಗೆ ಮಾರಕಾಸ್ತ್ರಗಳೊಂದಿಗೆ ಗ್ಯಾರೇಜ್ಗೇ ನುಗ್ಗಿದ್ದ ಆರೋಪಿಗಳು, ಷರೀಫ್ನನ್ನು ಕೊಚ್ಚಿ ಹತ್ಯೆ ಮಾಡಿದ್ದರು. ಪೊಲೀಸರು ಮೊಬೈಲ್ ಕರೆ ವಿವರದ (ಸಿಡಿಆರ್) ಸುಳಿವು ಆಧರಿಸಿ ಸೋಮವಾರ ರಾತ್ರಿ ಮುನೀರ್ ಗ್ಯಾಂಗನ್ನು ಬಂಧಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.