ADVERTISEMENT

ಅಪಘಾತ: ಉಪನ್ಯಾಸಕ ಸಾವು

​ಪ್ರಜಾವಾಣಿ ವಾರ್ತೆ
Published 22 ಜನವರಿ 2020, 21:38 IST
Last Updated 22 ಜನವರಿ 2020, 21:38 IST
ಸಿದ್ಧಗಂಗಯ್ಯ
ಸಿದ್ಧಗಂಗಯ್ಯ   

ನೆಲಮಂಗಲ: ಅಡ್ಡಬಂದ ನಾಯಿಯನ್ನು ತಪ್ಪಿಸಲು ಯತ್ನಿಸಿದ ಸ್ಕೂಟರ್ ಸವಾರನ ಮೇಲೆ ಲಾರಿ ಹರಿದು ಅವರು ಸ್ಥಳದಲ್ಲೇ ಮೃತಪಟ್ಟ ಘಟನೆ ಟಿ. ಬೇಗೂರು ಬಳಿ ನಡೆದಿದೆ.

ವಿಜಯನಗರ ಅತ್ತಿಗುಪ್ಪೆ ಸರ್ಕಾರಿ ಕಾಲೇಜಿನ ಕನ್ನಡ ಉಪನ್ಯಾಸಕ ಸಿದ್ಧಗಂಗಯ್ಯ (53) ಮೃತಪಟ್ಟವರು. ಮಾಗಡಿ ತಾಲ್ಲೂಕಿನ ಚಿಕ್ಕಮಸ್ಕಲ್‌ ಗ್ರಾಮದಿಂದ ನೆಲಮಂಗಲ ಮಾರ್ಗವಾಗಿ ಅವರು ಬುಧವಾರ ಬೆಳಿಗ್ಗೆ ಬೆಂಗಳೂರಿಗೆ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ. ಲಾರಿ ಚಾಲಕ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸ್ ಇನ್‌ಸ್ಪೆಕ್ಟರ್‌ ವೀರೇಂದ್ರಕುಮಾರ್ ತಿಳಿಸಿದ್ದಾರೆ.

ತೊಟ್ಟಿಗೆ ಬಿದ್ದ ಮಗು ಸಾವು: ಕೆಂಪಲಿಂಗನಹಳ್ಳಿ ಬಳಿ ತೋಟದ ಮನೆಯೊಂದರಲ್ಲಿ ಮಧುಗಿರಿಯ ಕಾರ್ಮಿಕರೊಬ್ಬರ ಮಗು ಗಂಗೋತ್ರಿ (4) ಮನೆಯ ಮುಂದಿನ ತೊಟ್ಟಿಗೆ ಬಿದ್ದು ಮೃತಪಟ್ಟಿದೆ.

ADVERTISEMENT

ಅನಾಥ ಶವ ಪತ್ತೆ: ನೆಲಮಂಗಲ ಪಟ್ಟಣದ ದಾದಾಪೀರ್‌ ಬಡಾವಣೆಯ ಹಿಂಭಾಗದಲ್ಲಿ ಸುಮಾರು 40 ವರ್ಷದ ಯುವಕನೊಬ್ಬ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೇಸರಿ ಬಣ್ಣದ ಶರ್ಟ್‌ ಧರಿಸಿದ್ದಾರೆ. ನೆಲಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.