ADVERTISEMENT

ವಿದ್ಯುತ್‌ ವ್ಯತ್ಯಯ ಇಂದಿನಿಂದ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2021, 22:23 IST
Last Updated 7 ಆಗಸ್ಟ್ 2021, 22:23 IST

ಬೆಂಗಳೂರು: ತುರ್ತು ನಿರ್ವಹಣಾ ಕಾರ್ಯ ಕೈಗೆತ್ತಿಕೊಳ್ಳುತ್ತಿರುವುದರಿಂದ ನಗರದ ಕೆಲವು ಪ್ರದೇಶಗಳಲ್ಲಿ ಇದೇ 8ರಿಂದ 10ರವರೆಗೆ ಬೆಳಿಗ್ಗೆ 10ರಿಂದ ಸಂಜೆ 5ರ ತನಕ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಹೇಳಿದೆ.

ಭಾನುವಾರ ವಿದ್ಯುತ್‌ ಪೂರೈಕೆ ವ್ಯತ್ಯಯವಾಗುವ ಪ್ರದೇಶಗಳು: ಎಲೆಕ್ಟ್ರಾನಿಕ್ ಸಿಟಿ ಎರಡನೇ ಹಂತ, ವೀರಸಂದ್ರ, ದೊಡ್ಡನಾಗಮಂಗಲ, ಅನಂತನಗರ, ಶಾಂತಿಪುರ, ಬಯೊಕಾನ್, ಟೆಕ್ ಮಹೀಂದ್ರ, ಚೊಕ್ಕಸಂದ್ರ, ಕೋಣನಕುಂಟೆ ಕ್ರಾಸ್‌ ಅಡ್ಡರಸ್ತೆ, ತಲಘಟ್ಟಪುರ, ದೊಡ್ಡಕಲ್ಲಸಂದ್ರ, ಶ್ರೀನಿಧಿ ಬಡಾವಣೆ, ಆವಲಹಳ್ಳಿ, ಎಚ್.ಎಸ್.ಆರ್. ಬಡಾವಣೆ, ಟೀಚರ್ಸ್ ಕಾಲೊನಿ, ಜಕ್ಕಸಂದ್ರ, ವೆಂಕಟಾಪುರ.

ಮುತ್ತನಲ್ಲೂರು, ರಾಮಸಾಗರ, ಲಕ್ಷ್ಮಿಸಾಗರ, ನಾರಾಯಣಘಟ್ಟ, ಸಿಂಗೇನ ಅಗ್ರಹಾರ, ಗೋಪಸಂದ್ರ, ಅಲಿಬೊಮ್ಮಸಂದ್ರ, ಚಿಕ್ಕತಿಮ್ಮಸಂದ್ರ, ಹುಸ್ಕೂರು, ಘಟ್ಟಹಳ್ಳಿ, ಚಿಕ್ಕನಾಗಮಂಗಲ, ರಾಯಸಂದ್ರ ರಸ್ತೆ, ಬಾನಹಳ್ಳಿ, ಕೀರ್ತಿ ಬಡಾವಣೆ, ಟಿಸಿಪಿ ಬಡಾವಣೆ, ಚಂದಾಪುರ ವಕೀಲ್ ಬಡಾವಣೆ, ಬೊಮ್ಮಸಂದ್ರ ಕೈಗಾರಿಕಾ ಪ್ರದೇಶ, ಹೆನ್ನಾಗರ.

ADVERTISEMENT

ಸೋಮವಾರ ವಿದ್ಯುತ್‌ ಪೂರೈಕೆ ವ್ಯತ್ಯಯವಾಗುವ ಪ್ರದೇಶಗಳು: ಮಾರತ್ತಹಳ್ಳಿ ಸರ್ವಿಸ್ ರಸ್ತೆ, ಜೆ.ಪಿ.ಟೆಕ್ ಪಾರ್ಕ್, ಅಡೋಬ್‌ ಟೆಕ್‌ ಪಾರ್ಕ್‌ ಮತ್ತು ಸುತ್ತಮುತ್ತಲಿನ ಪ್ರದೇಶ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.