ಬೆಂಗಳೂರು: ನಟ ದಿವಂಗತ ಪುನೀತ್ ರಾಜ್ಕುಮಾರ್ ಸ್ಮರಣಾರ್ಥಸಂಜಯನಗರದ ಮಹಾನಸಾ ಆಯುರ್ವೇದ ಸಂಸ್ಥೆಯು ಲಲಿತಕಲಾ ಪ್ರದರ್ಶನ ಏರ್ಪಡಿಸಿದೆ.
ಇದೇ 28ರಂದು ಸಂಜೆ 4ರಿಂದ 6ರವರೆಗೆ ನಡೆಯಲಿರುವ ಈ ಪ್ರದರ್ಶನದಲ್ಲಿ ಝೂಮ್ ಅಥವಾ ಸಂಜಯನಗರದ ಮಹಾನಸ ಆಯು
ರ್ವೇದ ಕೇಂದ್ರದಲ್ಲಿ ಆಫ್ಲೈನ್ ಮೂಲಕ ಭಾಗವಹಿಸಬಹುದು.
ಪೇಂಟಿಂಗ್, ಚಿತ್ರಕಲೆ, ಪೆನ್ಸಿಲ್ ಸ್ಕೆಚ್, ಕೋಲಾಜ್, ಆವೆಮಣ್ಣಿನ ಕಲಾಕೃತಿಗಳು ಸೇರಿ ಯಾವುದೇ ಪ್ರಕಾರದ ಲಲಿತಕಲಾ ಪ್ರದರ್ಶನಕ್ಕೆ ಅವಕಾಶ ಇದೆ. ವಯಸ್ಸಿನ ಮಿತಿ ಇಲ್ಲ. ₹150 ನೋಂದಣಿ ಶುಲ್ಕವನ್ನು ಡಾ.ಪುನೀತ್ ರಾಜ್ಕುಮಾರ್ ಸ್ಮರಣಾರ್ಥ ಕ್ಯಾನ್ಸರ್ ಪೀಡಿತ ವ್ಯಕ್ತಿಗಳ ಚಿಕಿತ್ಸೆಗೆ ದೇಣಿಗೆ ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ಸಂಪರ್ಕ: 9620580101
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.