ADVERTISEMENT

ಬನಶಂಕರಿ ಸಾಂಸ್ಕೃತಿಕ ಸಂಘದ ಸ್ವಾಗತ ಸಮಿತಿ ಸದಸ್ಯ ರಾಮಕೃಷ್ಣ ಐತಾಳ್ ನಿಧನ

ನಿಧನ ವಾರ್ತೆ

​ಪ್ರಜಾವಾಣಿ ವಾರ್ತೆ
Published 4 ಜೂನ್ 2022, 19:34 IST
Last Updated 4 ಜೂನ್ 2022, 19:34 IST
ರಾಮಕೃಷ್ಣ ಐತಾಳ್‌
ರಾಮಕೃಷ್ಣ ಐತಾಳ್‌   

ಬೆಂಗಳೂರು: ಬನಶಂಕರಿ ಸಾಂಸ್ಕೃತಿಕ ಸಂಘದ ಸ್ವಾಗತ ಸಮಿತಿ ಸದಸ್ಯ ರಾಮಕೃಷ್ಣ ಐತಾಳ್ (86) ಅವರು ಶನಿವಾರ ಬೆಳಿಗ್ಗೆ ನಿಧನರಾದರು.

ಅವರಿಗೆ ಪತ್ನಿ, ಪುತ್ರ ಹಾಗೂ ಪುತ್ರಿ ಇದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಕೆಲ ದಿನಗಳಿಂದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.

ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿಕುದುರು ಗ್ರಾಮದವರಾದ ರಾಮಕೃಷ್ಣ ಅವರು, ಇಲ್ಲಿನ ಹನುಮಂತನಗರದಲ್ಲಿ ನೆಲೆಸಿದ್ದರು. ಬನಶಂಕರಿ ಸಾಂಸ್ಕೃತಿಕ ಸಂಘದ ಅಧ್ಯಕ್ಷರಾಗಿ, ಕಾರ್ಯದರ್ಶಿಯಾಗಿ, ಸಲಹೆಗಾರರಾಗಿಯೂ ಕಾರ್ಯ ನಿರ್ವಹಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.