ADVERTISEMENT

‘ರಂಗಭೂಮಿಯಿಂದ ಸಾಹಿತ್ಯ ಶ್ರೀಮಂತವಾಗುತ್ತೆ’

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2019, 20:01 IST
Last Updated 1 ಏಪ್ರಿಲ್ 2019, 20:01 IST
ರಂಗಭೂಮಿ ಕಲಾವಿದೆ ಗೌರಿದತ್ತು ಅವರಿಗೆ ರಂಗಗೌರವ ಪ್ರಶಸ್ತಿ ನೀಡಿ ವಿಜಯಮ್ಮ ಗೌರವಿಸಿದರು. ಬಸವರಾಜ ಸಬರದ, ನಗೆಮನೆ ಅಧ್ಯಕ್ಷ ಎಸ್.ಮಾದಯ್ಯ, ಮಾಲತೇಶ್ ಬಡಿಗೇರ, ಅದಮ್ಯ ರಂಗ ಸಂಸ್ಕೃತಿ ಟ್ರಸ್ಟ್‌ ಸಂಸ್ಥಾಪಕ ಕಾರ್ಯದರ್ಶಿ ಛಾಯಾ ಭಾರ್ಗವಿ, ಎಸ್.ಎಚ್.ಮಾದಯ್ಯ ಇದ್ದರು
ರಂಗಭೂಮಿ ಕಲಾವಿದೆ ಗೌರಿದತ್ತು ಅವರಿಗೆ ರಂಗಗೌರವ ಪ್ರಶಸ್ತಿ ನೀಡಿ ವಿಜಯಮ್ಮ ಗೌರವಿಸಿದರು. ಬಸವರಾಜ ಸಬರದ, ನಗೆಮನೆ ಅಧ್ಯಕ್ಷ ಎಸ್.ಮಾದಯ್ಯ, ಮಾಲತೇಶ್ ಬಡಿಗೇರ, ಅದಮ್ಯ ರಂಗ ಸಂಸ್ಕೃತಿ ಟ್ರಸ್ಟ್‌ ಸಂಸ್ಥಾಪಕ ಕಾರ್ಯದರ್ಶಿ ಛಾಯಾ ಭಾರ್ಗವಿ, ಎಸ್.ಎಚ್.ಮಾದಯ್ಯ ಇದ್ದರು   

ಬೆಂಗಳೂರು: ‘ಜನ ಸಮುದಾಯವು ರಂಗಭೂಮಿ ಕಲಾವಿದರಿಗೆ ಪ್ರೋತ್ಸಾಹ, ಸಹಕಾರ ಮತ್ತು ಅವಕಾಶ ಕಲ್ಪಿಸಿಕೊಡುವ ಮೂಲಕ ರಂಗಭೂಮಿಯನ್ನು ಉಳಿಸಬೇಕಾಗಿದೆ’ ಎಂದು ಲೇಖಕಿ ವಿಜಯಮ್ಮ ಅಭಿಪ್ರಾಯಪಟ್ಟರು.

ಅದಮ್ಯ ರಂಗ ಸಂಸ್ಕೃತಿ ಟ್ರಸ್ಟ್, ಉಲ್ಲಾಳು ವಾರ್ಡ್ ನಾಗರೀಕರ ವೇದಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ನಾಗದೇವನಹಳ್ಳಿಯ ಜ್ಞಾನಭಾರತಿ ಬಡಾವಣೆಯಲ್ಲಿ ಆಯೋಜಿಸಿದ್ದ ‘ವಸಂತ ರಂಗೋತ್ಸವ’ದಲ್ಲಿ ಅವರು ಮಾತನಾಡಿದರು.

‘ರಂಗಭೂಮಿ ಕಲಾವಿದರ ಜೀವನ ಕಷ್ಟದ ಪರಿಸ್ಥಿತಿಯಲ್ಲಿದ್ದರೂ ನೋವನ್ನು ಮನಸ್ಸಿನಲ್ಲಿ ಅದುಮಿಟ್ಟುಕೊಂಡು ಕಲೆಯ ರಸದೌತಣ ಉಣಬಡಿಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ದಣಿವು ತುಂಬಿರುವ ಮನಸ್ಸುಗಳಿಗೆ ನೆಮ್ಮದಿ ನೀಡುವ ತಾಣ ರಂಗಭೂಮಿಯಾಗಿದೆ’ ಎಂದರು.

ADVERTISEMENT

ಅಭಿನಯ ತರಂಗ ರಂಗಶಾಲೆ ಪ್ರಾಂಶುಪಾಲರಾದ ಗೌರಿದತ್ತು ಅವರು ರಂಗಗೌರವ ಪ್ರಶಸ್ತಿ ಸ್ವೀಕರಿಸಿ,‘ಬೆಂಗಳೂರು ಮಹಾನಗರ ಸೇರಿದಂತೆ ಎಲ್ಲ ನಗರ, ಪಟ್ಟಣಗಳಲ್ಲಿ ರಂಗಮಂಟಪಗಳಿವೆ. ಅವುಗಳನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ.

ರಂಗಭೂಮಿಯಿಂದ ಸಾಹಿತ್ಯ ಶ್ರೀಮಂತವಾಗುತ್ತದೆ’ ಎಂದರು.

ಲೇಖಕ ಬಸವರಾಜ ಸಬರದ, ‘ಯಾವುದೇ ಕಲಾವಿದರಾದರೂ ಶ್ರದ್ಧೆ, ಪ್ರಾಮಾಣಿಕತೆ, ಕಲಿಕೆ, ದಯೆ ಮೈಗೂಡಿಸಿಕೊಂಡಾಗ ಪ್ರತಿಭೆ ಹಾಗೂ ನಾಯಕತ್ವ ಹೊರಹೊಮ್ಮಲು ಸಾಧ್ಯ’ ಎಂದರು.

ಇದೇ ಸಂದರ್ಭದಲ್ಲಿ ನಿವೃತ್ತ ಕೃಷಿ ಅಧಿಕಾರಿ ಎಚ್‌.ಪಿ.ಶೋಭನಾಮೂರ್ತಿ ಅವರಿಗೆ ರಂಗಗೌರವ ಸಲ್ಲಿಸಲಾಯಿತು. ಎಸ್.ಎಸ್.ಎಂ.ಆರ್.ವಿ ಪದವಿ ಕಾಲೇಜು ಹಾಗೂ ರಂಗಾಂತರಂಗ ತಂಡವು ಕಾಳಿದಾಸರ ‘ಮೇಘಧೂತ’ ಕಾವ್ಯದ ಕಥಾಭಾಗವನ್ನು ಪ್ರದರ್ಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.