ADVERTISEMENT

ಮಲಗಿದ್ದಾಗ ಕಳ್ಳತನ!

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2019, 20:11 IST
Last Updated 18 ಏಪ್ರಿಲ್ 2019, 20:11 IST

ಬೆಂಗಳೂರು: ಬಾಪೂಜಿನಗರದ ಎನ್‌.ವೆಂಕಟೇಶ್ ಎಂಬುವರು, ಮನೆಯೊಳಗೆ ಸೆಕೆ ಎಂಬ ಕಾರಣಕ್ಕೆ ಮಂಗಳವಾರ ರಾತ್ರಿ ಪತ್ನಿ–ಮಕ್ಕಳ ಜತೆ ಮಹಡಿಯಲ್ಲಿ ಮಲಗಿದ್ದರು. ಎಲ್ಲರೂ ಗಾಢ ನಿದ್ರೆಯಲ್ಲಿದ್ದಾಗ ಕಟ್ಟಡ ಜಿಗಿದು ಬಂದ ಕಳ್ಳರಿಬ್ಬರು, ಮನೆಯ ಬೀಗ ಮುರಿದು ಅಲ್ಮೆರಾದಲ್ಲಿದ್ದ ₹ 50 ಸಾವಿರ ನಗದು ಹಾಗೂ 100 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.

ಮರುದಿನ ಬೆಳಿಗ್ಗೆ ವೆಂಕಟೇಶ್ ಪತ್ನಿ ಎಚ್ಚರಗೊಂಡು ಮನೆಗೆ ಹೋದಾಗ ಪ್ರಕರಣ ಬೆಳಕಿಗೆ ಬಂದಿದೆ.

ಕೂಡಲೇ ಅವರು ಪತಿ–ಮಕ್ಕಳಿಗೆ ವಿಷಯ ತಿಳಿಸಿದ್ದಾರೆ. ಬ್ಯಾಟರಾಯನಪುರ ಪೊಲೀಸರು ಸಿ.ಸಿ ಟಿ.ವಿ ಕ್ಯಾಮೆರಾಗಳ ಡಿವಿಆರ್ ಬಾಕ್ಸ್‌ಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸುತ್ತಿದ್ದಾರೆ. ವೆಂಕಟೇಶ್, ಸ್ಯಾಟಲೈಟ್ ಬಸ್ ನಿಲ್ದಾಣದ ಬಳಿ ಟೀ ಅಂಗಡಿ ಇಟ್ಟುಕೊಂಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.