ADVERTISEMENT

ರಾಜರಾಜೇಶ್ವರಿ ನಗರದಲ್ಲಿ ‘ವೋಟರ್‌ ಸ್ಲಿಪ್‌’ ವಿತರಣೆ ಬಿಜೆಪಿ

ಶಕ್ತಿ ಕೇಂದ್ರಗಳ ಮಟ್ಟದಲ್ಲೇ ಕಾರ್ಯಾಚರಣೆ ಆರಂಭಿಸಿದ ಬಿಜೆಪಿ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2020, 19:31 IST
Last Updated 1 ನವೆಂಬರ್ 2020, 19:31 IST

ಬೆಂಗಳೂರು: ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಉಪ ಚುನಾ ವಣೆಯಲ್ಲಿ ಬಹಿರಂಗ ಪ್ರಚಾರಕ್ಕೆ ಭಾನುವಾರ ಅವಕಾಶ ಇತ್ತಾದರೂ, ತನ್ನ ಶಕ್ತಿ ಕೇಂದ್ರಗಳ ಮಟ್ಟದಲ್ಲಿ ಬಿಜೆಪಿ ಕಾರ್ಯಾಚರಣೆ ನಡೆಸಿದೆ. ಮನೆ, ಮನೆ ಪ್ರಚಾರದ ಜತೆಯಲ್ಲೇ ಮತದಾರರಿಗೆ ‘ವೋಟರ್‌ ಸ್ಲಿಪ್‌’ ವಿತರಿಸುವ ಕೆಲಸಕ್ಕೆ ಚಾಲನೆ ನೀಡಿದೆ.

ಮತದಾರರ ಪಟ್ಟಿಯಲ್ಲಿ ಹೆಸರಿರುವ ಎಲ್ಲರಿಗೂ ಚುನಾವಣಾ ಆಯೋಗದಿಂದ ‘ವೋಟರ್‌ ಸ್ಲಿಪ್‌’ ವಿತರಿಸಲಾಗುತ್ತಿದೆ. ಅದನ್ನು ಮತದಾನದ ವೇಳೆ ಗುರು
ತಿನ ಚೀಟಿಯಾಗಿಯೂ ಬಳಸಲು ಅವಕಾಶವಿದೆ. ಅಂತಹ ‘ವೋಟರ್‌ ಸ್ಲಿಪ್‌’ಮುದ್ರಿಸಿರುವ ಬಿಜೆಪಿ, ಎಲ್ಲ ಮತದಾರರಿಗೂ ತಲುಪಿಸಲು ಪಕ್ಷದ ಕಾರ್ಯಕರ್ತರನ್ನು ನಿಯೋಜಿಸಿದೆ.

ಪ್ರತಿ ಮತಗಟ್ಟೆ ಹಂತದಲ್ಲಿ ಪಕ್ಷದ ಸಮಿತಿಗಳ ಅಧ್ಯಕ್ಷರಿಗೆ ವೋಟರ್‌ ಸ್ಲಿಪ್‌ ವಿತರಣೆಯ ಜವಾಬ್ದಾರಿ ನೀಡಲಾಗಿದೆ.

ADVERTISEMENT

ಮಾತಿನ ಚಕಮಕಿ: ಅಂತಿಮ ಸುತ್ತಿನ ಪ್ರಚಾರ ಆರಂಭವಾಗುತ್ತಿದ್ದಂತೆಯೇ ಬಿಜೆಪಿ, ಕಾಂಗ್ರೆಸ್‌ ಮತ್ತು ಜೆಡಿಎಸ್‌ ಕಾರ್ಯಕರ್ತರ ನಡುವೆ ಹಲವು ಕಡೆಗಳಲ್ಲಿ ಮಾತಿನ ಚಕಮಕಿ ನಡೆದಿದೆ. ಭಾನುವಾರ ‘ವೋಟರ್‌ ಸ್ಲಿಪ್‌’ ವಿತರಣೆಗೆ ಬಂದಿದ್ದ ಬಿಜೆಪಿ ಕಾರ್ಯಕರ್ತರನ್ನು ತಡೆಯಲು ಕಾಂಗ್ರೆಸ್‌ ಮತ್ತು ಜೆಡಿಎಸ್‌ ಕಾರ್ಯಕರ್ತರು ಯತ್ನಿಸಿದರು.

ಈ ಸಂದರ್ಭದಲ್ಲಿ ಪರಸ್ಪರ ವಾಗ್ವಾದ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.