ADVERTISEMENT

ಸಮರ್ಥನಂ ಟ್ರಸ್ಟ್‌ನಿಂದ ಸಂಗೀತ ರಸ ಸಂಜೆ

​ಪ್ರಜಾವಾಣಿ ವಾರ್ತೆ
Published 23 ಜೂನ್ 2025, 14:07 IST
Last Updated 23 ಜೂನ್ 2025, 14:07 IST
ನಗರದಲ್ಲಿ ಸಮರ್ಥನಂ ಟ್ರಸ್ಟ್ ಆಯೋಜಿಸಿದ್ದ ಸಂಗೀತ ಕಾರ್ಯಕ್ರಮವನ್ನು ಆದರ್ಶ್ ಶಾಸ್ತ್ರಿ ಉದ್ಘಾಟಿಸಿದರು. ಆರ್‌.ರವಿಚಂದರ್, ಅಶ್ವತ್ಥನಾರಾಯಣ್ ಇದ್ದಾರೆ. 
ನಗರದಲ್ಲಿ ಸಮರ್ಥನಂ ಟ್ರಸ್ಟ್ ಆಯೋಜಿಸಿದ್ದ ಸಂಗೀತ ಕಾರ್ಯಕ್ರಮವನ್ನು ಆದರ್ಶ್ ಶಾಸ್ತ್ರಿ ಉದ್ಘಾಟಿಸಿದರು. ಆರ್‌.ರವಿಚಂದರ್, ಅಶ್ವತ್ಥನಾರಾಯಣ್ ಇದ್ದಾರೆ.    

ಬೆಂಗಳೂರು: ಅರಮನೆ ಮೈದಾನದಲ್ಲಿ ಸಮರ್ಥನಂ ಟ್ರಸ್ಟ್ ಆಯೋಜಿಸಿದ್ದ ಸಹೋದರಿಯರ ಸಂಗೀತ ರಸ ಸಂಜೆಗೆ ಪ್ರೇಕ್ಷಕರು ತಲೆದೂಗಿದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಮೊಮ್ಮಗ, ಮಾಜಿ ಶಾಸಕ ಆದರ್ಶ್ ಶಾಸ್ತ್ರಿ ಮತ್ತು ಶಾಸಕ ಅಶ್ವತ್ಥನಾರಾಯಣ್ ಅವರು ಸಮರ್ಥನಂ ಟ್ರಸ್ಟ್‌ನ ಸಾಮಾಜಿಕ ಕಾರ್ಯಕ್ರಮದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.

ಚಲನಚಿತ್ರ ನಿರ್ದೇಶಕ ಯೋಗರಾಜ್ ಭಟ್, ಸಂಗೀತ ನಿರ್ದೇಶಕ ವಿ. ಹರಿಕೃಷ್ಣ ಮತ್ತು ಆರ್.ಪಿ.ಪಟ್ನಾಯಕ್ ಭಾಗವಹಿಸಿದ್ದರು.

ನಂದನ ಪ್ಯಾಲೆಸ್ ಅಧ್ಯಕ್ಷ ಆರ್. ರವಿಚಂದರ್ ಮಾತನಾಡಿ, ಅಂಧ ವಿದ್ಯಾರ್ಥಿಗಳ ಕಲ್ಯಾಣಕ್ಕಾಗಿ ಮಾಡುತ್ತಿರುವ ಈ ಕಾರ್ಯಕ್ರಮದಲ್ಲಿ ಸಾವಿರಾರು ಜನರು ಭಾಗವಹಿಸಿರುವುದು ಸಂತಸದ ವಿಚಾರ ಎಂದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.