ADVERTISEMENT

ಗಿರೀಶ್‌ಗೆ ‘ಅತ್ಯುತ್ತಮ ವಿಜ್ಞಾನ ಶಿಕ್ಷಕ ಪ್ರಶಸ್ತಿ’

​ಪ್ರಜಾವಾಣಿ ವಾರ್ತೆ
Published 2 ಜುಲೈ 2019, 19:46 IST
Last Updated 2 ಜುಲೈ 2019, 19:46 IST
ಅಜಯ್‌ ಕುಮಾರ್‌ ಬಹ್ರಿ ಹಾಗೂ ಬಿ.ಎಸ್‌.ಗಿರೀಶ್‌ ಅವರಿಗೆ ‘ಅತ್ಯುತ್ತಮ ವಿಜ್ಞಾನ ಶಿಕ್ಷಕ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಕೆ.ಎಸ್‌.ನಾರಾಯಣ್‌, ಪ್ರೊ.ಸಿ.ಎನ್‌.ಆರ್‌ ರಾವ್‌ ಹಾಗೂ ಇಂದುಮತಿ ರಾವ್‌ ಇದ್ದಾರೆ
ಅಜಯ್‌ ಕುಮಾರ್‌ ಬಹ್ರಿ ಹಾಗೂ ಬಿ.ಎಸ್‌.ಗಿರೀಶ್‌ ಅವರಿಗೆ ‘ಅತ್ಯುತ್ತಮ ವಿಜ್ಞಾನ ಶಿಕ್ಷಕ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಕೆ.ಎಸ್‌.ನಾರಾಯಣ್‌, ಪ್ರೊ.ಸಿ.ಎನ್‌.ಆರ್‌ ರಾವ್‌ ಹಾಗೂ ಇಂದುಮತಿ ರಾವ್‌ ಇದ್ದಾರೆ   

ಬೆಂಗಳೂರು: ಪ್ರೊ.ಸಿ.ಎನ್‌.ಆರ್‌. ರಾವ್‌ ಪ್ರತಿಷ್ಠಾನದ ವತಿಯಿಂದ 2018ನೇ ಸಾಲಿನ ‘ಅತ್ಯುತ್ತಮ ವಿಜ್ಞಾನ ಶಿಕ್ಷಕ ಪ್ರಶಸ್ತಿ’ಯನ್ನು ತುಮಕೂರು ಜಿಲ್ಲೆಯ ವಡ್ಡಗೆರೆ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಬಿ.ಎಸ್‌. ಗಿರೀಶ್‌ ಹಾಗೂ ಪಂಜಾಬ್‌ನ ಹಿರಿಯ ಮಾಧ್ಯಮಿಕ ಶಾಲೆಯ ಅಜಯ್‌ ಕುಮಾರ್‌ ಬಹ್ರಿ ಅವರಿಗೆನೀಡಿ ಗೌರವಿಸಲಾಗಿದೆ.

ನಗರದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಜವಾಹರಲಾಲ್‌ ನೆಹರೂ ಉನ್ನತ ವೈಜ್ಞಾನಿಕ ಸಂಶೋಧನಾ ಕೇಂದ್ರದ (ಜೆಎನ್‌ಸಿಎಎಸ್‌ಆರ್‌) ಅಧ್ಯಕ್ಷ ಪ್ರೊ.ಕೆ.ಎಸ್‌. ನಾರಾಯಣ್‌ ಪ್ರಶಸ್ತಿ ಪ್ರದಾನ ಮಾಡಿದರು.

ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ಪ್ರಾಧ್ಯಾಪಕ ಎ.ಕೆ.ಸೂದ್‌,ಜೆಎನ್‌ಸಿಎಎಸ್‌ಆರ್‌ ಪ್ರಾಧ್ಯಾಪಕ ಶೀಬಾ ವಾಸು ಅವರು ವಿಜ್ಞಾನ ಶಿಕ್ಷಕರಿಗೆ ಮಾರ್ಗದರ್ಶನ ನೀಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.