ADVERTISEMENT

ಸರೋಜಿನಿ ಮಹಿಷಿ ವರದಿ ಜಾರಿ: ಎಸ್‍ಡಿಪಿಐ ಆಗ್ರಹ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2020, 23:21 IST
Last Updated 9 ಮಾರ್ಚ್ 2020, 23:21 IST
ಕಾರ್ಯಕ್ರಮದಲ್ಲಿ ಇಲ್ಯಾಜ್ ಮಹಮ್ಮದ್ ಮಾತನಾಡಿದರು. ದೆಹ್ಲಾನ್ ಬಾಖಾವಿ, ಮಜೀತ್‌ ಖಾನ್ ಹಾಗೂ ಇತರರು ಇದ್ದರು
ಕಾರ್ಯಕ್ರಮದಲ್ಲಿ ಇಲ್ಯಾಜ್ ಮಹಮ್ಮದ್ ಮಾತನಾಡಿದರು. ದೆಹ್ಲಾನ್ ಬಾಖಾವಿ, ಮಜೀತ್‌ ಖಾನ್ ಹಾಗೂ ಇತರರು ಇದ್ದರು   

ಬೆಂಗಳೂರು:ರಾಷ್ಟ್ರೀಯ ಜನಸಂಖ್ಯಾ ನೋಂದಣಿಯನ್ನು (ಎನ್‌ಪಿಆರ್‌) ರಾಜ್ಯದ ಜನತೆ ತಿರಸ್ಕರಿಸಬೇಕು ಹಾಗೂ ಸರೋಜಿನಿ ಮಹಿಷಿ ವರದಿ ಜಾರಿ ಮಾಡಬೇಕು ಎಂದು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‍ಡಿಪಿಐ) ಆಗ್ರಹಿಸಿದೆ.

ನಗರದಲ್ಲಿ ಹಮ್ಮಿಕೊಂಡಿದ್ದ ಸಂಘಟನೆಯ ರಾಜ್ಯ ಪ್ರತಿನಿಧಿಗಳ ಸಭೆಯಲ್ಲಿ ವಿವಿಧ ನಿರ್ಣಯಗಳನ್ನು ಕೈಗೊಳ್ಳಲಾಯಿತು.

ಸಭೆಯಲ್ಲಿ ಮಾತನಾಡಿದ ಸಂಘಟನೆಯರಾಜ್ಯ ಘಟಕದ ಅಧ್ಯಕ್ಷ ಇಲ್ಯಾಜ್ ಮಹಮ್ಮದ್, ‘ಸರೋಜಿನಿ ಮಹಿಷಿ ವರದಿಶಿಫಾರಸ್ಸಿನ ಅನುಷ್ಠಾನದಲ್ಲಿ ಸರ್ಕಾರಗಳು ಹಿಂದೆ ಬಿದ್ದಿವೆ. ಹೊರ ರಾಜ್ಯಗಳಿಂದ ಬಂದವರು ರಾಜ್ಯದಲ್ಲಿ ಉದ್ಯಮ ಸ್ಥಾಪಿಸಿ, ಕನ್ನಡಿಗರನ್ನು ಕಡೆಗಣಿಸುತ್ತಿದ್ದಾರೆ. ಸರ್ಕಾರ ಕೂಡಲೇ ವರದಿ ಜಾರಿ ಮಾಡಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ರಾಜ್ಯದ ಅಭಿವೃದ್ಧಿಗೆ ಬಜೆಟ್ ಪೂರಕವಾಗಿಲ್ಲ. ನಗರ ಕೇಂದ್ರೀಕೃತ ಬಜೆಟ್‍ನಿಂದ ಗ್ರಾಮೀಣಾಭಿವೃದ್ಧಿ ಸಾಧ್ಯವಿಲ್ಲ. ಕೇಂದ್ರದಿಂದ ಬರಬೇಕಿದ್ದ ಹಣದ ಬಗ್ಗೆ ಚಕಾರ ಎತ್ತಲಿಲ್ಲ. ತೈಲ ದರ ಏರಿಸಿ ಜನಸಾಮಾನ್ಯರ ಮೇಲೆ ಹೊರೆ ಹಾಕಿದೆ. ಕೇಂದ್ರದ ಮೇಲೆ ಒತ್ತಡ ಹೇರಿ ಅನುದಾನ ಪಡೆಯಬೇಕು. ತೈಲ ಬೆಲೆಯನ್ನು ಕೂಡಲೇ ಇಳಿಸಬೇಕು’ ಎಂದು ಆಗ್ರಹಿಸಿದರು.

ರಾಷ್ಟ್ರೀಯ ಉಪಾಧ್ಯಕ್ಷ ದೆಹ್ಲಾನ್ ಬಾಖಾವಿ,‘ಎನ್‌ಪಿಆರ್‌ ದೇಶದಪ್ರಜೆಗಳ ಪೌರತ್ವ ಕಿತ್ತುಕೊಳ್ಳುವ ಅಥವಾ ಬಂಧನ ಕೇಂದ್ರಕ್ಕೆ ತಳ್ಳುವ ಕೂಪ.ರಾಜ್ಯದ ಜನತೆ ಯಾವುದೇ ಮಾಹಿತಿ ನೀಡದೆ, ಇದನ್ನು ತಿರಸ್ಕರಿಸಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.