ADVERTISEMENT

‘ಯಲಹಂಕ ಮೇಲ್ಸೇತುವೆಗೆ ಸಿದ್ಧಾರೂಢರ ಹೆಸರಿಡಿ’

​ಪ್ರಜಾವಾಣಿ ವಾರ್ತೆ
Published 7 ಜೂನ್ 2020, 19:04 IST
Last Updated 7 ಜೂನ್ 2020, 19:04 IST

ಬೆಂಗಳೂರು: ಯಲಹಂಕ ಮೇಲ್ಸೇತುವೆಗೆ ಸಿದ್ಧಾರೂಢರ ಹೆಸರಿಡುವಂತೆ ರಾಮೋಹಳ್ಳಿಯ ಸಿದ್ಧಾರೂಢ ಮಿಷನ್ ಆಶ್ರಮದ ಅಧ್ಯಕ್ಷ ಆರೂಢಭಾರತೀ ಸ್ವಾಮೀಜಿ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದಾರೆ.

‘ಯಾವುದೇ ರಸ್ತೆ ಅಥವಾ ಕಟ್ಟಡಗಳಿಗೆ ಆದರ್ಶ ವ್ಯಕ್ತಿಗಳ ಹೆಸರಿಡುವುದರಿಂದ ಅವರ ಆದರ್ಶಗಳು ಜನಮನದಲ್ಲಿ ಜೀವಂತವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಯಲಹಂಕ ಮೇಲ್ಸೇತುವೆಗೆ ವೀರ ಸಾವರ್ಕರ್ ಹೆಸರನ್ನಿಡುವುದು ಸೂಕ್ತ. ಒಂದು ವೇಳೆ ಕರ್ನಾಟಕದ ವ್ಯಕ್ತಿಯ ಹೆಸರನ್ನೇ ಇಡಬೇಕಾದಲ್ಲಿ ಸಿದ್ಧಾರೂಢರ ಹೆಸರನ್ನು ಪರಿಗಣಿಸಿ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT