ಬೆಂಗಳೂರು: ಭಾರತೀಯ ವೈದ್ಯಕೀಯ ಸಂಘದ (ಐಎಂಎ) ಕರ್ನಾಟಕ ಶಾಖೆಯ 2022ನೇ ಸಾಲಿನ ‘ಶಿಕ್ಷಕ ದಿನಾಚರಣೆ’ ಪ್ರಶಸ್ತಿಗೆ16 ವೈದ್ಯರು ಆಯ್ಕೆಯಾಗಿದ್ದಾರೆ.
ವೈದ್ಯಕೀಯ ಕಾಲೇಜುಗಳಲ್ಲಿನ ಸೇವೆ ಹಾಗೂ ವೈದ್ಯಕೀಯ ಕ್ಷೇತ್ರದ ಸಾಧನೆಗೆ ಈ ಪ್ರಶಸ್ತಿ ನೀಡಲಾಗುತ್ತಿದೆ.ರಾಯಚೂರಿನ ಡಾ. ಅರವಿಂದ ಕುಮಾರ್, ಮಂಗಳೂರಿನ ಡಾ. ಚಕ್ರಪಾಣಿ ಎಂ., ಬೆಂಗಳೂರಿನ ಡಾ. ದಿವಾಕರ್ ಜಿ.ವಿ., ವಿಜಯಪುರದ ಡಾ. ಗುರುಶಾಂತಪ್ಪ, ಬಾಗಲಕೋಟೆಯ ಡಾ.ಕಲಡಗಿ ಪಾಂಡವೀರಪ್ಪ, ಬೆಂಗಳೂರಿನ ಮಾಲಿನಿ ಕೆ.ವಿ., ಡಾ. ನಾಗರತ್ನಾ ಆರ್., ಕೋಲಾರದ ಡಾ. ನಾರಾಯಣಸ್ವಾಮಿ ಎಂ., ಚಿತ್ರದುರ್ಗದ ಡಾ. ಪ್ರಹ್ಲಾದ್ ಎನ್.ಬಿ., ಮಣಿಪಾಲದ ಡಾ. ಶರತ್ ಕುಮಾರ್ ರಾವ್, ಹಾಸನದ ಡಾ. ಸುಧಾ ಟಿ.ಆರ್., ಚಾಮರಾಜನಗರದ ಡಾ. ಸಂಜೀವ್ ಜಿ.ಎಂ ಅವರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಶಿವಮೊಗ್ಗದ ಡಾ. ಗಂಗಾಧರ್ ಕೆ.ಎಸ್., ವಿಜಯಪುರದ ಡಾ. ಸುರೇಶ್ ಕೆ., ಚಿಕ್ಕಬಳ್ಳಾಪುರದ ಡಾ. ವೆಂಕಟೇಶ್ ಎಚ್.ವಿ. ಹಾಗೂ ಬೆಂಗಳೂರಿನ ಡಾ.ಎಸ್.ಟಿ. ಯಾವಗಲ್ ಅವರು ಪ್ರಶಸ್ತಿಗೆ ಭಾಜನರಾಗಿದ್ದಾರೆ. ಸೆ.4ರಂದು ಬೆಳಿಗ್ಗೆ 9 ಗಂಟೆಗೆ ಬೆಂಗಳೂರಿನ ಐಎಂಎ ಕಚೇರಿಯ ಡಾ.ಎಂ.ಎ. ನರಸಿಂಹಾಚಾರ್ ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಸಂಘದ ಕಾರ್ಯದರ್ಶಿ ಡಾ.ಎಸ್.ಎಂ. ಪ್ರಸಾದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.