ADVERTISEMENT

ಚಪ್ಪಲಿ ಕದಿಯಲು ಬಂದವ ಸೆರೆ

​ಪ್ರಜಾವಾಣಿ ವಾರ್ತೆ
Published 19 ಮೇ 2021, 19:57 IST
Last Updated 19 ಮೇ 2021, 19:57 IST

ಬೆಂಗಳೂರು: ನಿವೃತ್ತ ಐಎಫ್‌ಎಸ್‌ ಅಧಿಕಾರಿಯ ಮನೆಯಲ್ಲಿ ಚಪ್ಪಲಿ ಕದಿಯಲು ಬಂದಿದ್ದ ಕಳ್ಳನನ್ನು ಅಧಿಕಾರಿಯೇ ಪೊಲೀಸರಿಗೆ ಒಪ್ಪಿಸಿರುವ ಘಟನೆ ಎಚ್‌ಎಸ್‌ಆರ್ ಬಡಾವಣೆಯಲ್ಲಿ ನಡೆದಿದೆ.

ಒಡಿಶಾದ ಮನೋಜ್ ಕುಮಾರ್ ರಾವತ್ (42) ಬಂಧಿತ ಆರೋಪಿ. ನಿವೃತ್ತಐಎಫ್‌ಎಸ್‌ ಅಧಿಕಾರಿ ದೇವಯ್ಯ ನೀಡಿದ ದೂರಿನ ಮೇರೆಗೆ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.

ಎಚ್‌ಎಸ್‌ಆರ್ ಬಡಾವಣೆಯ ಆರನೇ ಹಂತದಲ್ಲಿದ್ದ ಮನೆಯಲ್ಲಿ ದೇವಯ್ಯ ವಾಸವಿದ್ದರು. ಸೋಮವಾರ ರಾತ್ರಿ ಮನೆಗೆ ನುಗ್ಗಿದ್ದ ಕಳ್ಳ, ಎರಡನೇ ಮಹಡಿಯಲ್ಲಿದ್ದ ಚಪ್ಪಲಿ ಕದ್ದಿದ್ದ. ಜೊತೆಗೆ ಗ್ಯಾಸ್ ಸಿಲಿಂಡರ್ ಹಾಗೂ ಕನ್ನಡಿಯನ್ನೂ ಕದ್ದು ಪರಾರಿಯಾಗಲು ಯತ್ನಿಸಿದಾಗ ದೇವಯ್ಯ ಅವರ ಕೈಗೆ ಸಿಕ್ಕಿಬಿದ್ದಿದ್ದ.

ADVERTISEMENT

ಕಾವಲುಗಾರನ ಸಹಾಯದಿಂದ ಕಳ್ಳನನ್ನು ಸೆರೆಹಿಡಿದು, ವಿಚಾರಿಸಿದಾಗ ಚಪ್ಪಲಿ ಕದಿಯಲು ಬಂದಿರುವುದಾಗಿ ಒಪ್ಪಿಕೊಂಡಿದ್ದ.

‘ಈತ ನಗರದ ಹಲವು ಭಾಗಗಳಲ್ಲಿನ ಮನೆಗಳಲ್ಲಿ ಚಪ್ಪಲಿ ಕದ್ದು, ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಮಾರುತ್ತಿದ್ದ’ ಎಂದು ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.