ಬೆಂಗಳೂರು: ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಅವರ ತಾಯಿಸೀತಮ್ಮ ತಿಮ್ಮೇಗೌಡ ಅವರ ಕೋರಿಕೆಯ ಮೇರೆಗೆ ಸದಾಶಿವನಗರದ ನಿವಾಸಕ್ಕೆ ಬಿಜೆಪಿ ನಾಯಕ ಎಸ್.ಎಂ.ಕೃಷ್ಣ ಭೇಟಿ ನೀಡಿದರು.
ಕಳೆದ ವಾರವಷ್ಟೇಸೀತಮ್ಮ ಅವರ ಹುಟ್ಟುಹಬ್ಬ ನೆರವೇರಿತ್ತು. ಈ ವೇಳೆ, 'ಹುಟ್ಟುಹಬ್ಬಕ್ಕೆ ಏನು ಕೋರಿಕೆ ಇದೆ?’ ಎಂದು ಸೋಮಶೇಖರ್ ಅವರು ತಾಯಿಯನ್ನು ಕೇಳಿದ್ದರು. ‘ನಾನು ಎಸ್.ಎಂ.ಕೃಷ್ಣ ಅವರ ಅಭಿಮಾನಿ. ಅವರನ್ನು ಒಮ್ಮೆ ಭೇಟಿಯಾಗಬೇಕು’ ಎಂದುಸೀತಮ್ಮ ಇಂಗಿತ ವ್ಯಕ್ತಪಡಿಸಿದ್ದರು.
ಈ ಕೋರಿಕೆಯನ್ನು ಎಸ್.ಎಂ.ಕೃಷ್ಣ ಅವರಿಗೆ ತಲುಪಿಸಿ, ತಾಯಿಯನ್ನು ಅವರ ನಿವಾಸಕ್ಕೆ ಕರೆದುಕೊಂಡು ಬರುವುದಾಗಿ ಮನವಿ ಮಾಡಲಾಗಿತ್ತು. ಆದರೆ, ‘ಸೀತಮ್ಮ ಅವರು ನನಗಿಂತ ಹಿರಿಯರು.ಅವರು ನಮ್ಮ ಮನೆಗೆ ಬರುವುದು ಉಚಿತವಲ್ಲ. ನಾನೇ ಅವರ ಮನೆಗೆ ಬಂದು ಭೇಟಿಯಾಗುತ್ತೇನೆ’ ಎಂದು ಎಸ್.ಎಂ.ಕೃಷ್ಣ ಭರವಸೆ ನೀಡಿದ್ದರು.
ಕೊಟ್ಟ ಮಾತಿನಂತೆ ಎಸ್.ಎಂ.ಕೃಷ್ಣ ಅವರು ಸೋಮಶೇಖರ್ ನಿವಾಸಕ್ಕೆ ಮಂಗಳವಾರ ರಾತ್ರಿ ಭೇಟಿ ನೀಡಿ, ಕುಟುಂಬದೊಂದಿಗೆ ಕೆಲಕಾಲ ಮಾತನಾಡುವ ಮೂಲಕ ಸೀತಮ್ಮ ಅವರ ಕೋರಿಕೆಯನ್ನು ಈಡೇರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.