ADVERTISEMENT

ಕೆ.ಆರ್.ಪುರ: ಮನೆಗೆ ನುಗ್ಗಿದ ಬಸ್, ಸಹೋದರರಿಬ್ಬರಿಗೆ ಗಂಭೀರ ಗಾಯ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2021, 22:02 IST
Last Updated 4 ಮಾರ್ಚ್ 2021, 22:02 IST
ಮಂಡೂರಿನಲ್ಲಿ ಮನೆಗೆ ನುಗ್ಗಿದ ಬಸ್ಸು
ಮಂಡೂರಿನಲ್ಲಿ ಮನೆಗೆ ನುಗ್ಗಿದ ಬಸ್ಸು   

ಕೆ.ಆರ್.ಪುರ: ಖಾಸಗಿ ಬಸ್‌ ಮನೆಗೆ ನುಗ್ಗಿ ಸಹೋದರರಿಬ್ಬರಿಗೆ ಗಂಭೀರ ಗಾಯವಾಗಿರುವ ಘಟನೆ ಅವಲಹಳ್ಳಿ ಠಾಣೆ ವ್ಯಾಪ್ತಿಯ ಮಂಡೂರಿನಲ್ಲಿ ಜರುಗಿದೆ.

ಮಂಡೂರು ನಿವಾಸಿ ದೇವರಾಜ್ ಹಾಗೂ ನಂದನ್ ಎಂಬುವರಿಗೆ ಗಂಭೀರ ಗಾಯಗಳಾಗಿದ್ದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಗುರುವಾರ ಬೆಳಿಗ್ಗೆ ಟಿಸಿಎಲ್ ಕಂಪನಿಗೆ ಸೇರಿದ ಬಸ್‌ ಕಾರ್ಮಿಕರನ್ನು ಕರೆದುಕೊಂಡು ಹೋಗುತ್ತಿದ್ದ ವೇಳೆ ನೇರವಾಗಿ ಮನೆಗೆ ನುಗ್ಗಿದೆ. ಚಾಲಕ ಪಾನಮತ್ತನಾಗಿ ಬಸ್ ಚಲಾಯಿಸುತ್ತಿದ್ದ ಎಂದು ಸ್ಥಳೀಯರು ದೂರಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.