ADVERTISEMENT

ತ್ಯಾಗರಾಜರ ಆರಾಧನೋತ್ಸವ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2019, 19:44 IST
Last Updated 14 ಏಪ್ರಿಲ್ 2019, 19:44 IST
ಮಹಿಳೆಯರು ತ್ಯಾಗರಾಜರ ಕೀರ್ತನೆಗಳನ್ನು ಹಾಡಿದರು
ಮಹಿಳೆಯರು ತ್ಯಾಗರಾಜರ ಕೀರ್ತನೆಗಳನ್ನು ಹಾಡಿದರು   

ಯಲಹಂಕ: ತತ್ವ ಪ್ರತಿಷ್ಠಾನವು ಇಲ್ಲಿನ ಉಪನಗರದಲ್ಲಿ ತ್ಯಾಗರಾಜರು ಹಾಗೂ ಪುರಂದರದಾಸರ ಆರಾಧನೋತ್ಸವ ಏರ್ಪಡಿಸಿತ್ತು.

ಮಕ್ಕಳು ಸೇರಿದಂತೆ 200ಕ್ಕೂ ಹೆಚ್ಚು ಜನರು ಪಾಲ್ಗೊಂಡು, ತ್ಯಾಗರಾಜರ ಹಾಗೂ ಪುರಂದರದಾಸರ ಹಲವು ಕೀರ್ತನೆಗಳನ್ನು ಹಾಡಿದರು.

ಶಾಸಕ ಎಸ್.ಆರ್.ವಿಶ್ವನಾಥ್, ‘ದಾಸ ಸಾಹಿತ್ಯವು ನಮ್ಮ ಸಂಸ್ಕೃತಿಯನ್ನು ಶ್ರೀಮಂತಗೊಳಿಸಿದೆ. ಇದನ್ನು ಮತ್ತಷ್ಟು ಗಟ್ಟಿಗೊಳಿಸಲು ಇಂತಹ ಉತ್ಸವಗಳು ನಡೆಯಬೇಕು’ ಎಂದರು.

ADVERTISEMENT

ಸಂಗೀತ ಕ್ಷೇತ್ರದಲ್ಲಿನ ಸಾಧನೆಗಾಗಿ ವಿದ್ವಾನ್ ಟಿ.ಎಂ.ರಾಘವೇಂದ್ರ ಅವರನ್ನು ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.