ADVERTISEMENT

‘ಅಧ್ಯಯನದಿಂದಲೇ ಬರವಣಿಗೆ ಸಾಧ್ಯ’

ಪ್ರೊ. ಎಂ. ಬಸವಣ್ಣಗೆ ವಿ.ಕೃ. ಗೋಕಾಕ್‌ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2019, 19:47 IST
Last Updated 8 ಸೆಪ್ಟೆಂಬರ್ 2019, 19:47 IST
ಲೇಖಕ ಪ್ರೊ.ಎಂ.ಬಸವಣ್ಣ ಅವರಿಗೆ ‘ಪ್ರೊ.ವಿ.ಕೃ.ಗೋಕಾಕ್’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಡಾ.ವಿ.ಆರ್.ಪಂಚಮುಖಿ, ಅನಿಲ್ ಗೋಕಾಕ್, ಭಾರತೀಯ ವಿದ್ಯಾಭವನದ ನಿರ್ದೇಶಕ ಎಚ್.ಎನ್ ಸುರೇಶ್, ಭಾರತೀಯ ವಿದ್ಯಾಭವನದ ಆಡಳಿತ ಮಂಡಳಿಯ ಸದಸ್ಯ ಚಿರಂಜೀವಿ ಸಿಂಗ್ ಮತ್ತು ವಿನಾಯಕ ಗೋಕಾಕ್ ವಾಙ್ಮಯ ಟ್ರಸ್ಟ್ ಅಧ್ಯಕ್ಷ ವೈ.ಎನ್.ಗಂಗಾಧರ ಸೆಟ್ಟಿ ಇದ್ದರು –ಪ್ರಜಾವಾಣಿ ಚಿತ್ರ
ಲೇಖಕ ಪ್ರೊ.ಎಂ.ಬಸವಣ್ಣ ಅವರಿಗೆ ‘ಪ್ರೊ.ವಿ.ಕೃ.ಗೋಕಾಕ್’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಡಾ.ವಿ.ಆರ್.ಪಂಚಮುಖಿ, ಅನಿಲ್ ಗೋಕಾಕ್, ಭಾರತೀಯ ವಿದ್ಯಾಭವನದ ನಿರ್ದೇಶಕ ಎಚ್.ಎನ್ ಸುರೇಶ್, ಭಾರತೀಯ ವಿದ್ಯಾಭವನದ ಆಡಳಿತ ಮಂಡಳಿಯ ಸದಸ್ಯ ಚಿರಂಜೀವಿ ಸಿಂಗ್ ಮತ್ತು ವಿನಾಯಕ ಗೋಕಾಕ್ ವಾಙ್ಮಯ ಟ್ರಸ್ಟ್ ಅಧ್ಯಕ್ಷ ವೈ.ಎನ್.ಗಂಗಾಧರ ಸೆಟ್ಟಿ ಇದ್ದರು –ಪ್ರಜಾವಾಣಿ ಚಿತ್ರ   

ಬೆಂಗಳೂರು:‘ನೂರು ಪುಟಗಳನ್ನು ಅಧ್ಯಯನ ಮಾಡಿದರೆ ಮಾತ್ರ ಒಂದು ಪುಟ ಬರೆಯಲು ಸಾಧ್ಯ. ಬರಹಗಾರರು ಹೆಚ್ಚು ಅಧ್ಯಯನಶೀಲರಾಗಬೇಕು’ ಎಂದು ಲೇಖಕ ಪ್ರೊ. ಎಂ. ಬಸವಣ್ಣ ಹೇಳಿದರು.

ನಗರದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಪ್ರೊ. ವಿ.ಕೃ. ಗೋಕಾಕ್‌ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ‘ಆಸಕ್ತಿಯಿಂದ ಬರೆಯುವ ಬರಹ ಜನರನ್ನು ಬೇಗ ತಲುಪುತ್ತದೆ’ ಎಂದು ತಿಳಿಸಿದರು.

ಅರ್ಥಶಾಸ್ತ್ರಜ್ಞ ಡಾ. ವಿ.ಆರ್. ಪಂಚಮುಖಿ, ‘ಪ್ರತಿಯೊಬ್ಬರೂ ಶ್ರದ್ಧೆ ಮತ್ತು ನಿಷ್ಠೆಯಿಂದ ಕಾರ್ಯನಿರ್ವಹಿಸಿದರೆ ಮಾತ್ರ ದೇಶ ಪ್ರಗತಿ ಹೊಂದಲು ಸಾಧ್ಯ’ ಎಂದರು.

ADVERTISEMENT

‘ಯಾವುದೇ ಕ್ಷೇತ್ರವಿರಲಿ, ನಮ್ಮತನವನ್ನು ನಾವು ಮರೆಯಬಾರದು. ಸ್ವಂತಿಕೆಗೆ ಬೆಲೆ ಕೊಟ್ಟರೆ ಮಾತ್ರ ಸಾಧನೆ ಮಾಡಲು ಸಾಧ್ಯವಾಗುತ್ತದೆ’ ಎಂದು ಹೇಳಿದರು.

ವಿ.ಕೃ. ಗೋಕಾಕ್‌ ವಾಙ್ಮಯ ಟ್ರಸ್ಟ್‌ ವತಿಯಿಂದ ಈ ಪ್ರಶಸ್ತಿ ನೀಡಲಾಯಿತು. ಟ್ರಸ್ಟ್‌ನ ಅಧ್ಯಕ್ಷ ವೈ.ಎನ್. ಗಂಗಾಧರ್‌ ಸೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.