ADVERTISEMENT

‘ಸಾಮಾಜಿಕ ಜವಾಬ್ದಾರಿ ಪುಸ್ತಕದಲ್ಲೇ ಉಳಿದಿದೆ’

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2019, 18:33 IST
Last Updated 6 ಅಕ್ಟೋಬರ್ 2019, 18:33 IST
ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಸಿ.ಎನ್‌.ಅಶ್ವತ್ಥನಾರಾಯಣ ಅವರು ಸರ್ಕಾರಿ ಶಾಲಾ ಮುಖ್ಯೋಪಾಧ್ಯಾಯರಿಗೆ ಪುಸ್ತಕ ವಿತರಿಸಿದರು. ರಾಷ್ಟ್ರೀಯ ಸೇವಾ ಯೋಜನೆಯ ರಾಜ್ಯ ಅಧಿಕಾರಿ ಗಣನಾಥ ಶೆಟ್ಟಿ ಎಕ್ಕಾರು, ವಸಂತ ಕುಮಾರ್, ವೂಡೇ ಪಿ.ಕೃಷ್ಣ ಇದ್ದಾರೆ–ಪ್ರಜಾವಾಣಿ ಚಿತ್ರ
ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಸಿ.ಎನ್‌.ಅಶ್ವತ್ಥನಾರಾಯಣ ಅವರು ಸರ್ಕಾರಿ ಶಾಲಾ ಮುಖ್ಯೋಪಾಧ್ಯಾಯರಿಗೆ ಪುಸ್ತಕ ವಿತರಿಸಿದರು. ರಾಷ್ಟ್ರೀಯ ಸೇವಾ ಯೋಜನೆಯ ರಾಜ್ಯ ಅಧಿಕಾರಿ ಗಣನಾಥ ಶೆಟ್ಟಿ ಎಕ್ಕಾರು, ವಸಂತ ಕುಮಾರ್, ವೂಡೇ ಪಿ.ಕೃಷ್ಣ ಇದ್ದಾರೆ–ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಸಾಮಾಜಿಕ ಜವಾಬ್ದಾರಿ ಕೇವಲ ಪುಸ್ತಕಗಳಲ್ಲಿ ಉಳಿದಿದೆ. ಆದರೆ, ಸಮಾಜದ ಮುಖ್ಯಭೂಮಿಕೆಯಲ್ಲಿ ಆ ಜವಾಬ್ದಾರಿ ಮರೆಯಾಗಿದೆ. ವಿದ್ಯಾರ್ಥಿಗಳು ಸಮಾಜದಲ್ಲಿ ಎದುರಾಗುವ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸಕ್ರಿಯರಾಗುತ್ತಿಲ್ಲ’ ಎಂದುಉಪಮುಖ್ಯಮಂತ್ರಿ ಸಿ.ಎನ್‌.ಅಶ್ವತ್ಥನಾರಾಯಣ ತಿಳಿಸಿದರು.

‘ಕ್ಯಾಂಪಸ್‌ ಟು ಕಮ್ಯುನಿಟಿ’ ಸಂಸ್ಥೆಯು ಶನಿವಾರ ಆಯೋಜಿಸಿದ್ದ ಸ್ವಯಂಸೇವಕರ ಸಭೆ ಹಾಗೂ ‘ಸ್ಕೂಲ್‌ ಬೆಲ್‌’ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿವಿದ್ಯಾರ್ಥಿಗಳು ಪಡೆದ ಅಂಕಗಳ ಆಧಾರದ ಮೇಲೆ ವಿಶ್ವವಿದ್ಯಾಲಯಗಳಲ್ಲಿ ಪ್ರವೇಶಾತಿ ನೀಡುತ್ತಿಲ್ಲ. ಪಠ್ಯೇತರ ಚಟುವಟಿಕೆ ಕುರಿತು ಅರಿಗೆ ಇರುವ ಆಸಕ್ತಿ ಹಾಗೂ ಸಾಮಾಜಿಕ ಕಳಕಳಿ ಆಧರಿಸಿ ಪ್ರವೇಶ ನೀಡುತ್ತಾರೆ’ ಎಂದರು.

ADVERTISEMENT

ಲೇಖಕ ವಸಂತ ಕುಮಾರ್, ‘ಸರ್ಕಾರಿ ಶಾಲೆಗಳ ಅಭಿವೃದ್ಧಿಸರ್ಕಾರದ ಕೆಲಸ ಎಂಬ ಭಾವನೆ ಜನರಲ್ಲಿ ಬೇರೂರಿದೆ. ಜನರು ಶಾಲೆಯನ್ನು ತಮ್ಮದೆಂದು ಭಾವಿಸಿ ಅಭಿವೃದ್ಧಿಪಡಿಸಬೇಕು’ ಎಂದು ತಿಳಿಸಿದರು.

ಫರ್ಸ್ಟ್‌ ಅಮೆರಿಕನ್‌ ಸಂಸ್ಥೆಯ ಸಂಗೀತಾ ಫ್ಲೋರ, ಆರ್ಟ್‌ ಮ್ಯಾಟರ್ಸ್‌ ಮುಖ್ಯಸ್ಥ ರಘು ಪೂಜಾರ್‌, ಹೇಮಂತ್‌ ಕಿಂಚಾ ಭಾಗವಹಿಸಿದ್ದರು.

‘ಕ್ಯಾಂಪಸ್‌ ಟು ಕಮ್ಯುನಿಟಿ’ ಸಂಸ್ಥೆಯುಮಹಾತ್ಮಗಾಂಧಿ ಜಯಂತಿ ಅಂಗವಾಗಿ ಹಮ್ಮಿಕೊಂಡಿರುವ ‘ಸ್ಕೂಲ್‌ ಬೆಲ್‌’ ಕಾರ್ಯಕ್ರಮದಡಿ 150 ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿಗೆ ನೆರವಾಗುತ್ತಿದೆ. ಶಾಲೆಗಳಗೋಡೆಗಳಿಗೆ ಚಿತ್ತಾರ ಬಳಿಯುತ್ತಿದೆ. ಶೈಕ್ಷಣಿಕ ಕಿಟ್‌ ಹಾಗೂ ಕ್ರೀಡಾ ಕಿಟ್‌ ನೀಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.